ಪ್ರಮುಖ ಸುದ್ದಿ

KSRTC ಬಸ್ ನಿಲ್ಲಾಣದಲ್ಲಿ ಇಬ್ಬರಿಗೆ ಬಟ್ಟೆ ಬಿಚ್ಚಿ ಬಡಿದರು!

ಚಿತ್ರದುರ್ಗ: ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಕಾಟ ಮಿತಿ ಮೀರಿದೆ. ನಿನ್ನೆ ಸಂಜೆ ಮಹಿಳೆಯ ಬಳಿಯಿದ್ದ ಮೊಬೈಲ್ ಕದ್ದು ಎಸ್ಕೇಪ್ ಆಗುವ ವೇಳೆ ಇಬ್ಬರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಕಳ್ಳರ ಕಾಟದಿಂದ ಮೊದಲೇ ರೋಸಿಹೋಗಿದ್ದ ಜನ ಇಬ್ಬರು ಕಳ್ಳರಿಗೆ ಅರೆನಗ್ನಗೊಳಿಸಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ನಾಗರಾಜ ಮತ್ತು ಕೇಶವ ಎಂಬ ಇಬ್ಬರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರೂ ಕಳ್ಳರು ಕುಡಿದ ಅಮಲಿನಲ್ಲಿದ್ದರು. ಕಳ್ಳತನ ಮಾಡುವುದಲ್ಲದೆ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಪರಿಣಾಮ ರೊಚ್ಚಿಗೆದ್ದ ಜನ ಕಳ್ಳರನ್ನು ಹಿಡಿದು ಮಹಿಳೆಯ ಮೊಬೈಲ್ ವಾಪಸ್ ಕೊಡಿಸಿದ್ದಾರೆ. ಬಳಿಕ ತಲೆಗೊಂದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಟೆ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರನ್ನು ಜೈಲಿಗಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button