ಪ್ರಮುಖ ಸುದ್ದಿ
ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ರಂಗಪ್ರವೇಶ! ಪಕ್ಷ ಯಾವುದು ಗೊತ್ತಾ?
ಚನ್ನೈ: ಒಂದು ವಾರಗಳ ಕಾಲ ಟಿ.ನಗರದಲ್ಲಿನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ನಟ ರಜನೀಕಾಂತ್ ಕೊನೆಗೂ ರಾಜಕೀಯ ಎಂಟ್ರಿಯನ್ನು ಖಚಿತ ಪಡೆಸಿದ್ದಾರೆ. ನಾನು ಸ್ವಂತ ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ. ರಾಜ್ಯದ 234 ಮತಕ್ಷೇತ್ರಗಳಲ್ಲೂ ನಮ್ಮ ಅಬ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ನಟ ರಜನೀಕಾಂತ್ ಘೋಷಿಸಿದ್ದಾರೆ. ರಜನೀಕಾಂತ್ ರಾಜಕೀಯ ಪ್ರವೇಶದ ಘೋಷಣೆ ಕೇಳಿ ಅಭಿಮಾನಿಗಳು ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ತಮಿಳರಿಗಾಗಿ, ತಮಿಳುನಾಡಿಗಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಪ್ರಜಾಪ್ರಭುತ್ವವನ್ನು ನಾವೆಲ್ಲಾ ಉಳಿಸಬೇಕಿದೆ. ನನಗೆ ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಸಿಗುತ್ತದೆಂಬ ನಂಬಿಕೆಯಿದೆ. ಕಳೆದ ಒಂದು ವರ್ಷದಿಂದ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಮೂಡಿದೆ. ಆದರೆ, ನಿಮ್ಮ ಆಶೀರ್ವಾದ, ದೇವರ ಬಲವಿದ್ದರೆ ನಾನು ಉತ್ತಮ ಆಡಳಿತ ನೀಡುತ್ತೇನೆ. ಜಾತಿ ಮತ ಬೇಧವಿಲ್ಲದ ಆಡಳಿತ ತರುತ್ತೇನೆ ಎಂದು ನಟ ರಜನೀಕಾಂತ್ ಹೇಳಿದ್ದಾರೆ.