ಗುರುಮಠಕಲ್ ನೂತನ ತಾಲೂಕ ಅಸ್ತಿತ್ವಕ್ಕೆ;ಬಹುದಿನಗಳ ಕನಸು ನನಸು-ಖರ್ಗೆ
ಯಾದಗಿರಿ: ನೂತನ ತಾಲೂಕ ಅಸ್ತಿತ್ವಕ್ಕೆ ಬರುವ ಮೂಲಕ ಗುರುಮಠಕಲ್ ಭಾಗದ ಜನರ ಬಹುದಿನಗಳ ಕನಸು ನನಸಾಗಿದ್ದು, ಈ ಮೂಲಕ ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲಬುರಗಿ ಸಂಸದ ಡಾ:ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಗುರುಮಠಕಲ್ನ ವಿಶೇಷ ತಹಶೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗುರುಮಠಕಲ್ ನೂತನ ತಾಲೂಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗುರುಮಠಕಲ್, ಹುಣಸಗಿ, ವಡಗೇರಾ ಮೂರು ತಾಲೂಕಗಳ ರಚನೆಯಿಂದಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿದೆ. ಸರಕಾರಿ ಯೋಜನೆಗಳು, ಇನ್ನಿತರ ಕಾರ್ಯಗಳಿಗೆ ರೈತಾಪಿ ಜನರಿಗೆ ಅಲೆಯುವುದು ತಪ್ಪಿದಂತಾಗಿದೆ. ಸರಕಾರಿ ಇಲಾಖೆಗಳು ಸಹ ಹತ್ತಿರವಾಗಿದ್ದರಿಂದ ಯೋಜನೆಗಳು ಪಡೆಯಲು ಬಹಳ ಅನುಕೂಲವಾಗಿದೆ ಎಂದರು.
ಕೆಲ ನಾಯಕರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವುದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಅವರು ಇಂದು ಲೋಕಸಭಾ ಪ್ರತಿಪಕ್ಷದನಾಯಕ ಆಗಿರುವುದು ಸಂವಿಧಾನವೇ ಕಾರಣವೆಂದು ಕೊಂಡಾಡಿದರು. ಇಂದು ಪ್ರಜಾಪ್ರಭುತ್ವ ರಕ್ಷಿಸಬೇಕಾಗಿದೆ, ಹೆಣ್ಣು ಮಕ್ಕಳು, ರೈತರ ಹಿತರಕ್ಷಣೆಯಲ್ಲಿ ನಾವೆಲ್ಲರೂ ಸಂವಿಧಾನ ರಕ್ಷಣೆಗೆ ಬದ್ದರಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಗುರುಮಠಕಲ್ ಶಾಸಕ ಶ್ರೀ ಬಾಬುರಾವ್ ಚಿಂಚನಸೂರ ಅವರು ಮಾತನಾಡಿ ಗುರುಮಠಕಲ್ ಕ್ಷೇತ್ರವನ್ನು ಹಸಿರು ಕ್ರಾಂತಿ, ಉದ್ಯೋಗಿಕ ಕ್ರಾಂತಿಯನ್ನಾಗಿ ಮಾಡುವುದಲ್ಲದೆ ನೀರಾವರಿ ಹೊಂದಿರದ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಮೂಲಕ ಈ ಭಾಗದ ರೈತರ ಜಮೀನುಗಳನ್ನು ಸದಾ ಅಚ್ಚಾ ಹಸಿರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಡಾ:ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರ ಕೊಡುಗೆ ಅಪಾರವಾಗಿದೆ ಎಂದು ಕೊಂಡಾಡಿದ ಅವರು ಗುರುಮಠಕಲ್ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸದಾ ಸಿದ್ದನಿದ್ದೇನೆ. ಸದ್ಯ ಗುರುಮಠಕಲ್ ತಾಲೂಕ ಅಧಿಕೃತವಾಗಿ ಚಾಲನೆ ಸಿಕ್ಕಿದ್ದರಿಂದ ಕ್ಷೇತ್ರದಲ್ಲಿ ವಿವಿಧ ಸಮಗ್ರ ಅಭಿವೃದ್ಧಿಗೆ ಅವಕಾಶ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ಪುರಸಭೆ ಅಧ್ಯಕ್ಷ ಶ್ರೀ ರವಿಂದ್ರ ರೆಡ್ಡಿ, ತಾಲೂಕ ಪಂಚಾಯಿತಿ ಅಧ್ಯಕ್ಷ ಬಾಷು ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ವಿಧಾನ ಪರಿಷತ್ತು ಮಾಜಿ ಸದಸ್ಯ ಚೆನ್ನರೆಡ್ಡಿ ತುನ್ನೂರು, ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ:ಅವಿನಾಶ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್,