ಹೆಣಕ್ಕೆ ಹಣ ಪಡೆಯುವಂತಿಲ್ಲ ಹುಷಾರ್..?
ಮೈಸೂರಃ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳು ಮೃತಪಟ್ಟಲ್ಕಿ ಹಣ ಪಡೆಯುವಂತಿಲ್ಲ. ದುಡ್ಡು ಕಟ್ಟಿದ ಮೇಲೆಯೇ ಹೆಣ ಒಯ್ಯಬೇಕು ಎನ್ನುವಂತಿಲ್ಲ. ಡೆಡ್ ಬಾಡಿ ಒಯ್ಯಲು ಹಣ ಕೀಳುವುದು ಕಂಡು ಬಂದಲ್ಲಿ ಅಂತಹ ಆಸ್ಪತ್ರೆ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಸಿಎಂ ಸಿದ್ರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ನಿರ್ಮಿಸಲಾದ ಜಯದೇವ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ ಒಯ್ಯುವಾಗ ದುಡ್ಡು ಕಟ್ಟುವಂತಿಲ್ಲ ಎಂದು ತಿಳಿಸಿದರು.
ಜನರ ಆರೋಗ್ಯಕ್ಕೆ ಅನುಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಹೆಲ್ತ್ ಕಾರ್ಡ್ಗಗಳನ್ನು ವಿತರಿಸಲಾಗುತ್ತಿದೆ. ಅರ್ಹರು ಹೆಲ್ತ್ ಕಾರ್ಡ್ ಪಡೆದುಕೊಂಡು ಯೋಜನೆಯ ಲಾಭ ಪಡೆಯಬಹುದು.
ಅಲ್ಲದೆ ಮೈಸೂರ ರಾಜರ ನಂತರ ಯಾವುದೇ ಸರ್ಕಾರ ಮಾಡದ ಕೆಲಸ ನಾನು ಮಾಡಿದ್ದೇನೆ. ಮೈಸೂರ ಜಿಲ್ಲಾ ಅಭಿವೃದ್ಧಿಗೆ 5000 ಕೋಟಿ ಖರ್ಚು ಮಾಡಿದ್ದೇವೆ. ಸ್ವತಂತ್ರ ಭಾರತದಲ್ಲಿಯೇ ಇಷ್ಟು ವೆಚ್ಚ ಮಾಡಿದ ಮುಖ್ಯಮಂತ್ರಿಗಳೇ ಇಲ್ಲಾ ಎಂದು ತಮ್ಮ ಬೆನನ್ನು ತಾವೇ ತಟ್ಟಿಕೊಂಡರು ಎಂದರೆ ತಪ್ಪಿಲ್ಲ.