ಕೃಷಿಗೆ ಪೂರಕ ಕಾರ್ಯಕ್ರಮ ಆಯೋಜನೆಃ ಅವಿನಾಶ್ ಸಿನ್ನೂರ
ಲಯನ್ಸ್ ಕ್ಲಬ್ 24ನೇ ಪದಗ್ರಹಣ ಸಮಾರಂಭ
ಯಾದಗಿರಿಃ ಲಯನ್ಸ್ ಕ್ಲಬ್ ದೇಶದಲ್ಲಿಯೇ ಹೆಸರು ವಾಸಿಯಾದ ಸಂಸ್ಥೆ. ಸಾಮಾಜಿಕ ಕಾರ್ಯಚಟುವಟಿಕೆ ಕೈಗೊಳ್ಳುವ ಮೂಲಕ ಆಯಾ ಕ್ಷೇತ್ರದ ಕ್ಲಬ್ಗಳು ಅಲ್ಲಿನ ಸ್ಥಿತಿಗತಿ ಪ್ರಕಾರ ಸಮಸ್ಯೆಗಳಿಗೆ ಸ್ಪಂಧನೆ ನೀಡುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಲಯನ್ ರಮೇಶಚಂದ್ರ ಪಂಡಿತ್ ಹೇಳಿದರು.
ನಗರದ ಎಸ್.ಎಂ.ಸಿ ಶಾಲೆ ಸಭಾಂಗಣದಲ್ಲಿ ನಡೆದ ಇಲ್ಲಿನ ಲಯನ್ಸ್ ಕ್ಲಬ್ನ 24ನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ನೂತನ ಪದಾಧಿಕಾರಿಗಳು ಸಮರ್ಪಕವಾಗಿ ಸಾಮಾಜಿಕವಾಗಿ ಉತ್ತಮ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಇತರಡೆ ಕ್ಲಬ್ ಕೈಗೊಂಡ ಸಾಧನೆಯ ಕಾರ್ಯಗಳನ್ನು ತಿಳಿಸಿದರು. ಕ್ಲಬ್ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಅವಿನಾಶ ಸಿನ್ನೂರ ಮಾತನಾಡಿ, ಮುಂಬುರವ ದಿನಗಳಲ್ಲಿ ಕೃಷಿ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು.
ರೈತರಿಗೆ ಪೂರಕವಾದ ತರಬೇತಿಗಳನ್ನು ಆಯೋಜಿಸುವ ಮೂಲಕ ಹೊಸ ಆವಿಷ್ಕಾರಗಳನ್ನು ತಿಳಿಸುವ ಕಾರ್ಯ ಮಾಡಲಾಗುವುದು. ರೈತರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅವಿನಾಶ ಸಿನ್ನೂರ, ಕಾರ್ಯದರ್ಶಿಯಾಗಿ ಶಿವಕುಮಾರ ಆದೋನಿ, ಖಜಾಂಚಿಯಾಗಿ ಬ್ರಹ್ಮಯ್ಯ ಅಧಿಕಾರ ಸ್ವೀಕರಿಸಿದರು. ಲಯನ್ ಗುರುಲಿಂಗಯ್ಯ ಸಾಲಿಮಠ, ಸತೀಶ ದೋತ್ರೆ, ಶಂಕರಗೌಡ ಯಾಳವಾರ, ಚಂದ್ರಶೇಖರ ಲಿಂಗದಳ್ಳಿ, ಡಾ.ಚಂದ್ರಶೇಖರ ಸುಬೇದಾರ, ಡಾ.ಸುದತ್ ದರ್ಶನಾಪುರ ಮತ್ತು ಡಾ.ಎಸ್.ಆರ್.ಶಿಣ್ಣೂರ ಉಪಸ್ಥಿತರಿದ್ದರು.