ಶಹಾಪುರ: ಹಿರಿಯ ಉರ್ದು ಕವಿ ನಿಧನ
ಹಿರಿಯ ಉರ್ದು ಕವಿ ನಿಧನ
ಶಹಾಪುರ: ನಗರದ ಹಳೆಪೇಟೆಯ ಆಸರಮೊಹಲ್ಲಾದ ಹಿರಿಯ ಉರ್ದು ಕವಿ ಜನಾಬ ಅಲಹಾಜ ಮಹ್ಮದ್ ಅಜಮ ಆಸರ ಶಹಾಪುರಿ ಅವರು ಗುರುವಾರ ಸಂಜೆ 7 ಗಂಟೆಗೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು ಧರ್ಮಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಸಮಾಜದ ವಿಧಿ ವಿಧಾನದಂತೆ ಶುಕ್ರವಾರ ಸ್ಥಳೀಯವಾಗಿ ನೆರವೇರಿತು.
ಉರ್ದು ಭಾಷಾ ಪಾಂಡಿತ್ಯ ಹೊಂದಿದ್ದ ಅವರು, ಸಮುದಾಯದ ಅಪಾರ ಸಂಖ್ಯೆಯ ಕಾರ್ಯಕರ್ತರಿಗೆ ಮತ್ತು ಇತರರಿಗೆ ಅನುಭವ ಹಂಚಿಕೆ ಅಲ್ಲದೆ ಮಾರ್ಗದರ್ಶನ ನೀಡುತ್ತಿದ್ದರು. ಉರ್ದು ಕವಿತೆ, ಶಾಹಿರಿಗಳನ್ನು ಉತ್ತಮವಾಗಿ ರಚನೆ ಮಾಡಿರುವದಲ್ಲದೆ ಅವುಗಳನ್ನು ಪ್ರಸ್ತುತ ಪಡಿಸುವಲ್ಲಿ ವಾಗ್ಮಿಗಳಾಗಿದ್ದರು. ಅವರಿಗೆ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿ ಸಂದಿವೆ.
ಕಂಬನಿ:
ನಿಧನಕ್ಕೆ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಮಾಜಿಶಾಸಕ ಗುರುಪಾಟೀಲ ಶಿರವಾಳ, ಚಂದ್ರಶೇಖರ ಆರಬೋಳ, ಸುರೇಂದ್ರಪಾಟೀಲ ಮಡ್ನಾಳ, ಸೈಯದ್ ಮುಸ್ತಫಾ ದರ್ಬಾನ, ಸಲೀಂ ಸಂಗ್ರಾಮ, ಲಾಲ ಅಹ್ಮದ ಖುರೇಶಿ, ಶಫೀ ಸರ್ಮದ್ ಇತರರು ಕಂಬನಿ ಮಿಡಿದಿದ್ದಾರೆ.