ಅಂಕಣಪ್ರಮುಖ ಸುದ್ದಿ

ನಾಡಿನ ಒಳಿತಿಗಾಗಿ ಶ್ರೇಷ್ಠ ಸಂಕಲ್ಪ ಮಾಡಿ-ರಾಜಯೋಗಿ ರಾಮಸಿಂಗಾಲ್

 

ಯಾದಗಿರಿ, ಶಹಾಪುರಃ ನಾವು ನಮಗಾಗಿ ಬದುಕದೇ ಸಮಾಜದ ಒಳಿತಿಗಾಗಿ ಬದುಕಬೇಕು. ಸಮಾಜ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು ಎಂದು ರಾಜಯೋಗಿ ನ್ಯೂಯಾರ್ಕನ ಸಿವಿಲ್ ಇಂಜಿನೀಯರ್ ರಾಮಸಿಂಗಾಲ್ ಹೇಳಿದರು.

ಪಟ್ಟಣದ ಬಸವೇಶ್ವರ ನಗರದ ಜ್ಞಾನ ತೀರ್ಥ ಬ್ರಹ್ಮಕುಮಾರೀಸ್ ರಾಜಯೋಗಿ ಕೇಂದ್ರದ ಆಶ್ರಮದಲ್ಲಿ ನಡೆದ 7 ಶತ ಕೋಟಿ ಶ್ರೇಷ್ಠ ಕರ್ಮಗಳ ವೈಶ್ವಿಕ ಯೋಜನೆ ಕಾರ್ಯಕ್ರಮದಲ್ಲಿ ವಿಶೇಷ ಪ್ರವಚನ ನೀಡಿದ ಅವರು, ಜೀವನದಲ್ಲಿ ನಾವು ಎಷ್ಟು ಒಳ್ಳೆಯ ಕಾರ್ಯ ಮಾಡುತ್ತೇವೆ ಅಷ್ಟೇ ಲಾಭವಾಗುತ್ತದೆ. ಬೇರೆಯವರಿಂದ ಎಷ್ಟು ಪಡೆಯುತ್ತೇವೆ ಅಷ್ಟೇ ಕೆಳಗಿಳಿಯುತ್ತೇವೆ.

ನಾವು ಕೇಳುವುದಾದರೆ ನಮ್ಮಲ್ಲಿ ಸಾಮಥ್ರ್ಯದ ಕೊರತೆ ಇದೆ ಎಂದರ್ಥ. ಒಳ್ಳೆಯ ಕರ್ಮ ಸಂಕಲ್ಪಗಳಿಂದ ಒಳ್ಳೆಯದಾಗುತ್ತದೆ. ಶ್ರೇಷ್ಠ ಸಂಕಲ್ಪಗಳಿಂದ ಈ ನಾಡನ್ನು ಒಳ್ಳೆಯ ದಾರಿಯಲ್ಲಿ ನಡೆಸೋಣ ಎಂದರು.
ನಗರದ ಅರಕ್ಷಕ ನಿರೀಕ್ಷಕ ನಾಗರಾಜ ಜೆ. ಮಾತನಾಡಿ, ಮನುಷ್ಯ ಬುದ್ಧಿವಂತನಾಗಿದ್ದು, ವಿಶೇಷ ಗುಣಗಳನ್ನು ಹೊಂದಿರುತ್ತಾನೆ. ಹೀಗಾಗಿ ಮನುಷ್ಯರು ಸಮಾಜದ ಏಳ್ಗೆಗೆ ಶ್ರಮವಹಿಸಬೇಕು. ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದಾಗ ಮಾತ್ರ ಬದುಕು ಸುಂದರವಾಗುತ್ತದೆ. ನಮ್ಮಲ್ಲಿ ಶ್ರದ್ದೆ ಮತ್ತು ನಂಬಿಕೆ ಇದ್ದರೆ ಯಾವ ಕೆಲಸವು ಕಠಿಣವಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕುಮಾರಿ ಆಶ್ರಮದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಉಷಾ ಅಕ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೋಗ ಗುರು ನರಸಿಂಹ ವೈದ್ಯ ಹಾಗೂ ಬಿ.ಕೆ.ಶಿವಲೀಲಾ ಅಕ್ಕ ವೇದಿಕೆ ಮೇಲಿದ್ದರು.

ಕುಮಾರಿ ಜ್ಯೋತಿ ಪ್ರದರ್ಶಿಸಿದ ಭರತ ನಾಟ್ಯ ನೋಡುಗರ ಗಮನ ಸೆಳೆಯಿತು. ಈ ಸಂಧರ್ಭದಲ್ಲಿ ತಿಮ್ಮಯ್ಯ ಪುರ್ಲೆ, ವಿಜಯಲಕ್ಷ್ಮೀ ಯಕ್ಷಿಂತಿ, ಚಂದಪ್ಪ, ಸಿದ್ದಣ್ಣ ಮಾನಸುಣಗಿ, ಹೊನ್ನಾರಡ್ಡಿ ವಕೀಲರು, ಷಣ್ಮುಖ ಟೊಣಪೆ, ಬಸವರಾಜ, ಮಹಾರುದ್ರಣ್ಣ, ರಾಜರಾಮ ಅಣ್ಣ, ವೆಂಕಟೇಶ ಟೊಣಪೆ, ಮಹಾಂತೇಶ ಗಿಂಡಿ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಲೋಹಾರ್, ಪವನ ಪಾಟೀಲ ಉಪಸ್ಥಿತರಿದ್ದರು. ಬಿ.ಕೆ.ಚಂದ್ರ ಅಕ್ಕ ಜೇವರ್ಗಿ ಸ್ವಾಗತಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button