ಪ್ರಮುಖ ಸುದ್ದಿ

BREAKING-ಅಪರಿಚಿತ ವಾಹನ ಡಿಕ್ಕಿ ಕೃಷಿ ಕಾರ್ಮಿಕರಿಬ್ಬರ ಸಾವು

ಅಪರಿಚಿತ ವಾಹನ ಡಿಕ್ಕಿ ಕೃಷಿ ಕಾರ್ಮಿಕರಿಬ್ಬರ ಸಾವು
ಕಲ್ಬುರ್ಗಿಃ ಕೃಷಿ ಕೆಲಸಕ್ಕೆಂದು ರಸ್ತೆ‌ಬದಿ‌ ನಡೆದುಕೊಂಡು ಹೊರಟಿದ್ದ ಕಾರ್ಮಿಕರಿಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ‌ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮರತೂರ ರಸ್ತೆಯಲ್ಲಿ‌ ನಡೆದಿದೆ.

ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿ ಬೆಳಗ್ಗೆ 8-30 ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ದೇವರಾಜ ಕಿಶನ್ ರಾಠೋಡ (28) ಮತ್ತು ಪ್ರಭು ಪೂಜಾರಿ(30) ಎಂಬುವರೇ ಮೃತ ಕಾರ್ಮಿಕರಾಗಿದ್ದಾರೆ ಎಂದು ಗುರುತಿಸಲಾಗಿದೆ.

ಘಟನೆಗೆ ಕಾರಣನಾದ ಚಾಲಕ‌ ವಾಹನ‌ ಸಮೇತ‌ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button