ಧಾರಾಕಾರ ಮಳೆ; ರಾಜಧಾನಿ ತಲ್ಲಣ, ರಸ್ತೆ ಮೇಲೆ ಮೂರಡಿ ನೀರು
ಧಾರಾಕಾರ ಮಳೆ ರಾಜಧಾನಿ ತಲ್ಲಣ: ರಸ್ತೆ ಮೇಲೆ ಮೂರಡಿ ನೀರು
ಬೆಂಗಳೂರಃ ರಾಜಧಾನಿ ನಗರದಲ್ಲಿ ಕಳೆದ ಒಂದು ಗಂಟೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಇಡಿ ನಗರ ಬಿರುಗಾಳಿ, ಗುಡುಗು ಮಳೆಗೆ ತಲ್ಲಣಗೊಂಡಿದೆ. ಬೆಂಗಳೂರಿನ ಬಹುತೇಕ ಬಡಾವಣೆಗಳು ಮಳೆಯಿಂದಾಗಿ ರಸ್ತೆ, ಚರಂಡಿ ಹಲವು ಮನೆಗಳು ಸೇರಿದಂತೆ ವಾಹನಗಳು ನೀರಲ್ಲಿ ಮುಳುಗಿ ನಿಂತಿವೆ.
ಹಲವಡೆ ರಸ್ತೆ ಸಂಚಾರ ಬಂದಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಭಾರಿ ವ್ಯತೆ ಉಂಟಾಗಿದೆ. ಮೈಸೂರ ರಸ್ತೆಯಲ್ಲಿ ಸುಮಾರು ಒಂದು ಕಿಲೋ ಮೀಟರ ವರೆಗೂ ಸಾಲು ಸಾಲು ವಾಹನಗಳು ನಿಂತಿರುವುದು ಕಂಡು ಬರುತ್ತಿದೆ. ನಗರದ ಹಲವಡೆ ಬಿರುಗಾಳಿ ಮಳೆಗೆ ಗಿಡಮರಗಳು ನೆಲಕ್ಕೆ ಉರುಳಿದ್ದು, ರಿಚ್ಮಂಡ್ ಟೌನ್ ಪ್ರದೇಶದಲ್ಲಿ ಮೂರು ವಾಹನಗಳು ಜಖಂಗೊಂಡ ಘಟನೆಯು ಜರುಗಿದೆ.
ಸದ್ಯ ಯಾವುದೇ ಪ್ರಾಣ ಅಪಾಯದ ಸುದ್ದಿಗಳು ವರದಿ ಆಗಿಲ್ಲ. ಆದರೆ ಅಂಗಡಿ, ಮುಂಗಟ್ಟುಗಳು ಸೇರಿದಂತೆ ಬಹುತೇಕ ಬಡಾವಣೆಯ ಮನೆಗಳು, ರಸ್ತೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶದ ಜನತೆಯಂತೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನಗರ ಪ್ರದೇಶದ ನಿವಾಸಿಗಳು ಕಳೆದ ವಾರದಿಂದ ಮಳೆಗೆ ತತ್ತರಿಸಿದ್ದು, ಬಿಬಿಎಂಪಿ ಕಾರ್ಯ ವೈಖರಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟಾದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಬಂದಿಲ್ಲ. ಇನ್ನಾದರು ನಗರ ಪ್ರದಕ್ಷಿಣೆ ಹಾಕಲಿ. ಆಗ ಏನು ಸಮಸ್ಯೆ ಎಂಬುದು ರಾಜಕಾರಣಿಗಳ ಗಮನಕ್ಕೆ ಬರುತ್ತದೆ. ಮಳೆ ನಿಂತ ಮೇಲೆ ನಾಳೆ ಆಯಾ ಪ್ರದೇಶಕ್ಕೆ ತೆರಳಿ ಕಣ್ಣೊರೆಸುವ ಕೆಲಸ ಬೇಡ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮಳೆಗೆ ರಾಜಧಾನಿ ಜನ ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಬೇಕು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಾಪಾಸ್
ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕನಲ್ಲಿ ನಿರಂತರ ಪ್ರತಿಭಟನೆ ಕೈಗೊಂಡಿದ್ದರು, ಮಳೆಯಿಂದಾಗಿ ಕಾರ್ಯಕರ್ತೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಮಳೆಯಿಂದಾಗಿ ತಮ್ಮ ಹೋರಾಟವನ್ನು ವಾಪಾಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕನಿಷ್ಟ ವೇತನ ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರು. ನಿನ್ನೆ ಹೋರಾಟದ ಸ್ಥಳಕ್ಕೆ ಬಂದಿದ್ದ ಸಂಬಂಧಿಸಿದ ಅಧಿಕಾರಿಗಳು, ಹಾಗೂ ಮುಖಂಡರ ಮನವಿಗೆ ಕಿವಿಗೊಡದೇ ಹೋರಾಟ ಮುಂದುವರೆಸಿದ್ದರು. ಇದೀಗ ಬಂದ ಮಾಹಿತಿಯಂತೆ ಆಶಾ ಕಾರ್ಯಕರ್ತೆಯರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಸರ್ಕಾರ ಮಾಸಿಕ 3500 ರೂ.ಭತ್ಯೆಯನ್ನು ನೀಡುವುದಾಗಿ ಭರವಸೆ ನೀಡಿದ ಕಾರಣ ಎಲ್ಲಾ ಕಾರ್ಯಕರ್ತೆಯರು ಇದಕ್ಕೆ ಒಪ್ಪಿಕೊಂಡು ಪ್ರತಿಭಟನೆ ವಾಪಾಸ್ ಪಡೆಯಲಾಗಿದೆ ಎಂದು ಸಂಘದ ನಾಗಲಕ್ಷ್ಮೀ ಮಾಧ್ಯಮಗಳಿಗೆ ತಿಳಿಸಿದ್ದಾರೆ.