ಎಐಸಿಸಿ ಮೀಟಿಂಗ್ ಬಿಟ್ಟು ರಾಹುಲ್ ಸಡನ್ನಾಗಿ ಎದ್ದು ಬಂದಿದ್ದಾದರೂ ಏತಕೆ.?
ಸಪ್ರೇಟಾಗಿ ಕೊಠಡಿಯೊಂದರಲ್ಲಿ ರಮ್ಯ ಜೊತೆ ರಾಹುಲ್ ಗಾಂಧಿ ಮಾತುಕತೆ..!
ದೆಹಲಿಃ ಎಐಸಿಸಿ ಮೀಟಿಂಗ ತೆಗೆದುಕೊಳ್ಳುತಿದ್ದ ನೂತನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೀಟಿಂಗ ಮಧ್ಯೆ ಅವರ ಆಪ್ತ ಸಹಾಯಕರೊಬ್ಬರು ಸೋಶಿಯಲ್ ಮೀಡಿಯಾ ಕಾಂಗ್ರೆಸ್ ಮುಖ್ಯಸ್ಥೆಯಾದ ಕರ್ನಾಟಕದ ರಮ್ಯ ಬಂದಿರುವದಾಗಿ ತಿಳಿಸಿದ ತಕ್ಷಣ ಮೀಟಿಂಗ್ ಬಿಟ್ಟು ಎದ್ದು ನಿಂತ ರಾಹುಲ್, ರಮ್ಮಯಾಳನ್ನು ಸಪ್ರೇಟ್ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ.
ಈ ಪ್ರಸಂಗ ಕಂಡ ಮೀಟಿಂಗನಲ್ಲಿ ಕುಳಿತಿದ್ದ ಹಿರಿಯ ಕಾಂಗ್ರೆಸ್ ಮುಖಂಡರು ಪರಸ್ಪರರು ಮುಖ ನೋಡಿಕೊಂಡು ಕೈ ಕೈ ಹಿಸುಕಿಕೊಂಡರಂತೆ. 5-10 ನಿಮಿಷ ಮಾತು ಕತೆ ನಡೆಸಿದ ರಾಹುಲ್ ರಮ್ಯಳನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನ ಮುಖಂಡರಲ್ಲಿ ಈ ಪ್ರಸಂಗ ತಲೆಯಲ್ಲಿ ಕೊರೆಯುತ್ತಿದೆ.
ಮುಖ್ಯವಾಗಿ ಸಿಎಂ ಸಿದ್ರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಮತ್ತು ಸ್ವತಃ ತಾವೇ ಹೇಳಿಕೊಂಡು ತಿರುಗುತ್ತಿದ್ದ ಸಿದ್ರಾಮಯ್ಯನವರ ವಿರುದ್ಧ ರಾಹುಲ್ ಇಂದು ಪರಮೇಶ್ವರ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.
ಇದೇ ಸಂದರ್ಭ ರಮ್ಯ ಆಗಮಿಸಿದ್ದು, ಸಪ್ರೇಟ್ ಮಾತಿಗೆ ನಡೆದಿರುವುದು ಹಲವರಲ್ಲಿ ಕುತುಹಲ ಮೂಡಿಸಿದೆ. ಬರುವ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಬೇಕಾ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆ ರಮ್ಯ ಭೇಟಿ ಬೇರೆ ಹೀಗಾಗಿ ಹಲವು ತೋರುವ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕರ್ನಾಟಕದಲ್ಲಿ ಮೂರು ದಿನಗಳಲ್ಲಿ ಪ್ರವಾಸಕ್ಕೆ ಆಗಮಿಸಲು ತಯ್ಯಾರಿಯು ನಡೆದಿದೆ ಎನ್ನಲಾಗಿದೆ.