ಪ್ರಮುಖ ಸುದ್ದಿ
ಶಿರವಾಳ ಘಟನೆ 32 ಜನರ ವಿರುದ್ಧ ಪ್ರಕರಣ ದಾಖಲು 30 ಜನರ ಬಂಧನ
ಶಾಂತಿ ಸಭೆ, ಘಟನೆ ಮರುಕಳುಹಿಸದಂತೆ ಮನವರಿಕೆಃ ಸಿಪಿಐ ದೊಡ್ಮನಿ
ಶಹಾಪುರಃ ಕ್ಷುಲ್ಲಕ ಕಾರಣಕ್ಕಾಗಿ ತಾಲೂಕಿನ ಶಿರವಾಳ ಗ್ರಾಮದ ಎರಡು ದಲಿತ ಸಮುದಾಯದ ಗುಂಪುಗಳ ಮಧ್ಯ ನಡೆದ ಮಾರಾಮಾರಿ, ಕಲ್ಲು ತೂರಾಟದ ಘಟನೆಯಲ್ಲಿ ಓರ್ವ ಎ.ಎಸ್.ಐ ಮತ್ತು ಪೇದೆಯೊಬ್ಬರಿಗೆ ಬಲವಾದ ಪೆಟ್ಟು ಬಿದ್ದ ಪ್ರಕರಣದಲ್ಲಿ ಶಿರವಾಳ ದಲಿತ ಸಮುದಾಯದ ಎರಡು ಬಣಗಳ ಒಟ್ಟು 32 ಜನರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದು, ಈಗಾಗಲೇ 30 ಜನರನ್ನು ಬಂಧಸಲಾಗಿದೆ ಎಂದು ಸಿಪಿಐ ವೀರಣ್ಣ ದೊಡಮನಿ ವಿನಯವಾಣಿಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ವ್ಯವಸ್ಥೆಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಶಾಂತಿಯತ್ತ ಮರುಕಳಿಸುತ್ತಿದ್ದು, ಜನರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಎರಡು ಸಮುದಯದ ಜನರನ್ನು ಕರೆದು ಶಾಂತಿ ಸಭೆಗಳನ್ನು ನಡೆಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಉಭಯ ಜನರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.