ಕನ್ನಡ ಸಂಘಟನೆಗಳ ನಾಯಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಸನಗೌಡ ಯತ್ನಾಳ
ಕನ್ನಡ ಸಂಘಟನೆ ನಾಯಕರೆಲ್ಲರೂ ರೋಲ್ ಕಾಲ್ ಗಿರಾಕಿಗಳು ಎಂದ ಬಸನಗೌಡ ಯತ್ನಾಳ ವಿರುದ್ಧ ಕನ್ನಡಪರ ಸಂಘಟನೆ ನಾಯಕರು ಗರಂ
ನಕಲಿ, ರೋಲ್ ಕಾಲ್ ಹೋರಾಟಗಾರರೆಂದು ನಾಲಿಗೆ ಹರಿ ಬಿಟ್ಟ ಯತ್ನಾಳ್
ವಿಜಯಪುರಃ ಮರಾಠ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ರಚನೆಗೆ ಸರ್ಕಾರ ಆದೇಶ ನೀಡಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಮಾಧ್ಯಮಕ್ಕೆ ಹೇಳಿಕೆ ನೀಡಿವ ಬರದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ರೋಲ್ ಕಾಲ್ ಗಿರಾಕಿಗಳು, ಬೆಂಗಳೂರಿನ ಯಾವೋದೋ ಹೊಟೇಲ್ ನಲ್ಲಿ ಕುಳಿತು ಆ ಹೊಟೇಲ್ ತಮ್ಮದೆ ಎನ್ನುವವರು ಇವರೆಲ್ಲ ತಾವ ಹೋರಾಟ ಮಾಡ್ತಾರೆ ನಕಲಿ ಹೋರಾಟಗಾರರು ಇವರು ಎಂದು ಹಿಯಾಳಿಸಿದ್ದಾರೆ.
ಅಲ್ಲದೆ ಮುಂದುವರೆದು ಮಾತನಾಡಿದ ಅವರು, ವಿಜಯಪುರದಲ್ಲಿ ಯಾವ ಕನ್ನಡಪರ ಸಂಘಟನೆಯವರು ಬಂದ್ ಮಾಡ್ತಾರೆ ನೋಡ್ತಿನಿ ಎಂದು ಸವಾಲ್ ಎಸೆದಿದ್ದಾರೆ. ರಾಜ್ಯ ಸರ್ಕಾರದ ನಿಯಮ ಪಾಲಿಸಬೇಕು. ಹೋರಾಟಕ್ಕೆ ಸರ್ಕಾರ ಬಿಡುವದಿಲ್ಲ.
ನಾಡಿಗೆ ಮರಾಠಿಗರ ಕೊಡುಗೆ ಅಪಾರವಿದೆ. ಮೈಸೂರ, ಬೀದರ ಭಾಗದಲ್ಲಿ ಮರಾಠರಿದ್ದಾರೆ. ಕನ್ನಡನಾಡಿನಲ್ಲಿ ಜೀವಿಸುತ್ತಿದ್ದಾರೆ. ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಂಡರೆ ತಪ್ಪೇನು.? ಎನ್ನುವ ಭರದಲ್ಲಿ ಕನ್ನಡಪರ ಹೋರಾಟಗಾರರ ವಿರುದ್ಧ ನಾಲಿಗೆ ಹರಿ ಬಿಟ್ಟಿರುವದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಯತ್ನಾಳನನ್ನ ನಿಮ್ಹಾನ್ಸ್ ಗೆ ಸೇರಿಸಿ ಎಂದ ವಾಟಾಳ್
ಕನ್ನಡ ಪರ ಸಂಘಟನೆಗಳ ವಿರುದ್ಧ ನಾಲಿಗೆ ಹರಿ ಬಿಟ್ಟ ಯತ್ನಾಳ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಕನ್ನಡಪರ ಹೋರಾಗಾರ ವಾಟಾಳ್ ನಾಗರಾಜ, ನಾನೇನು ಹೇಳೋದು ಬೇಡ ಹೇಳಿದರೆ ಅವನಿಗೆ ಬೆಲೆ ಜಾಸ್ತಿ ಆಗುತ್ತದೆ. ಅವನಿಗೆ ಕನ್ನಡಿಗರೇ ಪಾಠ ಕಲಿಸಲಿದ್ದಾರೆ ಎಂದು ಏಕವಚನದಲ್ಲಿಯೇ ಯತ್ನಾಳ ವಿರುದ್ಧ ಹರಿಹಾಯ್ದರು.
ಅಂವ ನಿಮ್ಹಾನ್ಸ್ ನಲ್ಲಿ ಇರಬೇಕಿತ್ತು ತಪ್ಪಿಸಿಕೊಂಡು ಹೊರಗಡೆ ಹೋರಾಡ್ತಿದ್ದಾನೆ. ನನ್ನ ಬಗ್ಗೆ ಅವನಿಗೇನು ಗೊತ್ತಿಲ್ಲ ಬಾಯಿಗೆ ಬಂದಂತೆ ಮಾತನಾಡೋದೆ ಅವನ ಕೆಲಸ. ತನ್ನ ಸ್ವಾರ್ಥ ಲಾಭ ನೋಡಿಕೊಳ್ಳುವವ ಎಂದರು. ವಿಜಯಪುರ ಹೆಂಗೆ ಬಂದ್ ಮಾಡ್ತಾರೆ ನೋಡ್ತೀನಿ ಎಂದೇಳು ಅವನೇನ್ ಅಲ್ಲಿ ಪಾಳೇಗಾರನಾ ಎಂದು ನಸುನಕ್ಕರು.