ಸಾತ್ವಿಕ ಭೋಜನ ಸಾತ್ವಿಕ ಜೀವನ-ಕೀರ್ತನ ಪ್ರಭಾ ಮಾತೆ
ಚಾತುರ್ಮಾಸ ಆಚರಣೆಯಲ್ಲಿ ಮಾತೆ ಕೀರ್ತನ ಪ್ರಭಾ ಸಂದೇಶ
ಯಾದಗಿರಿ, ಶಹಾಪುರಃ ಜುಲೈ 15 ರಿಂದ ನಗರದ ಜೈನ್ ಮಂದಿರದಲ್ಲಿ ಜೈನ್ ಸಮಾಜದ ಮಾತೆ ಕೀರ್ತನ ಪ್ರಭಾ ಅವರು ಚಾತುರ್ಮಾಸ ಕಠಿಣ ವ್ರತದಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರು ಪ್ರತಿ ವರ್ಷ ಚಾತುರ್ಮಾಸ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೈನ ಸಮುದಾಯದ ಆಚರಣೆಯಲ್ಲಿ ಚಾತುರ್ಮಾಸ ಅತ್ಯಂತ ಕಠಿಣ ಕಟ್ಟುನಿಟ್ಟಿನ ಆಚರಣೆ ಇದಾಗಿದ್ದು. ಈ ಆಚರಣೆಯಲ್ಲಿ ತೊಡಗಿಸಿಕೊಂಡವರು, 36 ಗಂಟೆಗೆ ಒಂದು ಉಪವಾಸದಂತೆ ಇವರು ನಾಲ್ಕು ತಿಂಗಳು ಆಚರಣೆ ಮಾಡುತ್ತಾರೆ.
ಈ ಸಂದರ್ಭದಲ್ಲಿ ಮಾತೆ ಕೀರ್ತನ ಪ್ರಭಾ ಅವರನ್ನು ಮಾತನಾಡಿಸಿದ ಪತ್ರಕರ್ತರು, ಮಳೆಗಾಲದಲ್ಲಿ ಜೀವ ಜಂತುಗಳು ಸೂಕ್ಷ್ಮಾಣು ಜೀವಿಗಳ ಉತ್ಪತ್ತಿ ಜಾಸ್ತಿ ಇರುತ್ತದೆ. ಈ ಸಂದರ್ಭದಲ್ಲಿ ನಮ್ಮ ಸಂಚಾರದಿಂದ ಅವುಗಳ ನಮಗೆ ತಿಳಿಯದೇ ನಮ್ಮ ಕಾಲಬುಡದಲ್ಲಿ ಜೀವ ಕಳೆದುಕೊಳ್ಳುವ ಸಾಧ್ಯತೆ ಸಾಕಷ್ಟಿದೆ. ಆ ಕಾರಣಕ್ಕೆ ನಾವು ಈ ನಾಲ್ಕು ತಿಂಗಳ ಕಾಲ ಸಂಚಾರ ದೇಶ ಪರ್ಯಟನೆ ನಿಲ್ಲುಸುತ್ತೇವೆ.
ಯಾವ ಪ್ರದೇಶದಲ್ಲಿ ಪರ್ಯಟನೆ ನಿಲ್ಲುಸುತ್ತೇವೆ. ಅಲ್ಲಿಯೇ ನಾಲ್ಕು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತೇವೆ. ಆ ಜಾಗ ಬಿಟ್ಟು ಕದಲುವದಿಲ್ಲ. ಎಲ್ಲೂ ಸಂಚಾರಕ್ಕೆ ಹೋಗುವದಿಲ್ಲ ಎಂದು ತಿಳಿಸಿದ ಕೀರ್ತಣ ಪ್ರಭಾ ಅವರು, ಎಲ್ಲಿದ್ದರೂ ನಮ್ಮದು ಧರ್ಮ ಧ್ಯಾನ, ಉಪದೇಶ ದೇಶ ಪರ್ಯಟನೆ ಇದು ನಮ್ಮ ಕೆಲಸ. ನಾನು ಕಳೆದು 25 ವರ್ಷದ ಹಿಂದೆ ಸ್ನಾನ ಮಾಡಿದವರು. ಇಂದಿಗೂ ಸ್ನಾನ ಮಾಡಿಲ್ಲ. ಮಾಡುವದಿಲ್ಲ. ನಿದ್ದೆ ಬರುತ್ತಿದೆ ಅಂದರೆ ಮಾತ್ರ ಕಣ್ಣಿಗೆ ಮಾತ್ರ ಹನಿ ನೀರಿನಿಂದ ಒರಸೆಕೊಳ್ಳುತ್ತೇವೆ.
ಮತ್ತು ಕೇವಲ ತಂಬಿಗೆ ನೀರಲ್ಲಿ ನಮ್ಮೆಲ್ಲ ಬಟ್ಟೆಗಳನ್ನು ಒಗೆಯುತ್ತೇವೆ. ಯಾವುದೇ ಸೋಪು, ವಾಷಿಂಗ್ ಪೌಡರ್ ಬಳಸುವದಿಲ್ಲ. ಹಲ್ಲು ಸಹ ಪೇಸ್ಟ್ನಿಂದ ಉಜ್ಜುವದಿಲ್ಲ. ಇವೆಲ್ಲ ನಿಷಿದ್ಧ. ಹಸಿವಾದಲ್ಲಿ ಆಯಾ ಗ್ರಾಮ, ಪಟ್ಟಣದ ಯಾರದೇ ಮನೆಗಾಗಲಿ ಮಾಂಸಹಾರ ಬಿಟ್ಟು ಸಾತ್ವಿಕ ಆಹಾರ ಕೊಟ್ಟರೆ ಮಾತ್ರ ಸೇವಿಸುತ್ತೇವೆ. ಏನಿಲ್ಲದಿದ್ದರೂ ಒಂದಿಷ್ಟು ಅನ್ನ ನೀಡಿದರೆ ಸಾಕು.
ನಮ್ಮ ಜೈನ ಸಮುದಾಯದ ಮನೆಗಳಿಗೂ ಹೋಗುತ್ತೇವೆ. ನಮ್ಮದು ಊಟ ಜಾಸ್ತಿ ಇಲ್ಲ ಕಡಿಮೆ. ಆದರೆ ಸಾತ್ವಿಕ ಆಹಾರ ಸೇವಿಸುತ್ತೇವೆ. ಆ ಸಾತ್ವಿಕ ಆಹಾ ಸಾತ್ವಿಕ ಜೀವನ ಎಂಬುದು ನಮ್ಮ ನಿಯಮ. ಅದರಂತೆ ಪಾಲನೆ ಮಾಡುತ್ತೇವೆ. ತಲೆ ಮೇಲಿನ ಕೂದಲುಗಳು ಸಹ ಕೈಯಿಂದಲೇ ಕಿತ್ತಿ ಹಾಕುತ್ತೇವೆ. ಯಾವುದೇ ಅಸ್ತ್ರ ಬಳಕೆ ಮಾಡುವದಿಲ್ಲ ಎಂದು ತಿಳಿಸಿದರು.
ಯಾವುದೇ ಧರ್ಮವಾಗಲಿ ಹಿಂಸೆ ಮಾಡು ಎಂದು ಬೋಧನೆ ಮಾಡುವದಿಲ್ಲ. ಅಹಿಂಸೆಯನ್ನೇ ಪ್ರತಿಪಾದಿಸಿದ್ದಾರೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಅವರು ನಾಗರಿಕರಿಗೆ ಸಂದೇಶ ನೀಡಿದರು.