ಶ್ರೀಲಂಕಾ ಆತ್ಮಾಹುತಿ ದಾಳಿ ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ
ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ- ಸಿಪಿಐ ನಾಗರಾಜ
ಯಾದಗಿರಿ, ಶಹಾಪುರಃ ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕರ್ನಾಟಕದ 9 ಜನರು ಸೇರಿದಂತೆ ಭಾರತೀಯರು ಒಟ್ಟು 40 ಕ್ಕೂ ಹೆಚ್ಚು ಜನರು ಈ ಬಾಂಬ್ ದಾಳಿಯಲ್ಲಿ ಹತರಾಗಿದ್ದು, ಇಂಥಹ ಘಟನೆಗಳು ಭಾರತದಲ್ಲಿ ಮರುಕಳಿಸದಂತೆ ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಪಿಐ ನಾಗರಾಜ ಜೆ. ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ನಗರದ ವಿವಿಧ ಬಡಾವಣೆಯ ಮಂದಿರ, ಮಸೀದಿ ಮತತು ಚರ್ಚ್ಗಳ ಮುಖ್ಯಸ್ಥರು ಅಂಗಡಿ ಮುಂಗಟ್ಟುಗಳ ಮಾಲೀಕರ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಂದು ಮಸೀದಿ, ಮಂದಿರ, ಚರ್ಚ್ ಹೊಟೇಲ್, ಅಂಗಡಿ ಮುಂಗಟ್ಟುಗಳ ಮುಂಭಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಲು ಸಾರ್ವತ್ರಿಕ ಸಹಕಾರ ಅಗತ್ಯವಿದೆ.
ಕಾರಣ ಸರ್ವರೂ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ ಅಪರಿಚಿತ ವ್ಯಕ್ತಿಗಳ ಸಂಚಾರ ಅನುಮಾನ ಕಂಡು ಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಸರ್ವರೂ ಆದಷ್ಟು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಲ್ಲಿ ಅಪರಾಧಿಕ ಕೃತ್ಯಗಳನ್ನು ಶೀಘ್ರ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಸುತ್ತಮುತ್ತಲಿನ ಪರಿಸರದ ದೈನಂದಿನ ಚಟುವಟಿಕೆಗಳ ಚಿತ್ರಣವನ್ನು ಕಾಣಬಹುದಾಗಿದ್ದು, ಇವುಗಳು ಇಂದಿನ ವ್ಯವಸ್ಥೆಗೆ ಅವಶ್ಯಕವಾಗಿವೆ ಎಂದರು.
ನಗರದ ಪ್ರತಿಷ್ಠಿತ ಸ್ಥಳಗಳಾದ ಡಿಸಿಸಿ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ಗಳಲ್ಲಿ ಸಮಪರ್ಕವಾಗಿ ಸಿಸಿ ಟಿವಿಗಳು ಸ್ಥಗಿತಗೊಂಡಿದ್ದು, ಇವುಗಳಿಂದ ಕಳ್ಳತನ, ದರೋಡೆ ಪ್ರಕರಣ ಪತ್ತೆಗೆ ಅಡ್ಡಿ ಉಂಟಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಮಾನಗಳಲ್ಲಿ ರೈತರ ಹಣವನ್ನು ಬ್ಯಾಂಕ್ಗಳಲ್ಲೆ ಕಸಿದಕೊಂಡು ಪರಾರಿಯಾದರೂ ದರೋಡೆಕೋರರ ಗುರುತು ಸಿಗದ ಸ್ಥಿತಿಯಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಲಾಗಿದೆ. ಈ ಅವ್ಯವಸ್ಥೆಗಳಿಂದ ಅಪರಾಧಿಕ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿವೆ.
ಕಾರಣ ಸಂಬಂಧಪಟ್ಟ ಬ್ಯಾಂಕ್, ಹೆಟೇಲ್, ಅಂಗಡಿ ಮನೆಗಳ ಮಾಲೀಕರು ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅವ್ಯವಹಾರಗಳು ಕೊಲೆ ದರೋಡೆಗಳು ಕಡಮೆಯಾಗುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು,.
ಸಭೆಯಲ್ಲಿ ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ನಾಗಪ್ಪ ತಹಸೀಲ್ದಾರ, ಶಿವಪುತ್ರ ಜವಳಿ, ಸಯ್ಯದ್ ಖಾಲಿದ, ಜಮೀರಸಾಬ್ ಸೇರಿದಂತೆ ಮಸೀದಿ, ಮಂದಿರ ಮತ್ತು ಚರ್ಚ್ ಅರ್ಚಕರು, ಮುಖ್ಯಸ್ಥರು ನಗರದ ವಿವಿಧ ಬಡಾವಣೆಗಳ ಗಣ್ಯರು ಭಾಗವಹಿಸಿದ್ದರು.
ಸಿಸಿ ಕ್ಯಾಮೆರಾ ಕಾರ್ಯನಿರ್ಹಣೆಗೆ ನಗರಸಭೆ ಸ್ಪಂಧಿಸಲಿ
ನಗರಸಭೆ ಅನುದಾನದಲ್ಲಿ 13 ಲಕ್ಷ.ರೂ. ವೆಚ್ಚದಲ್ಲಿ ನಗರದ ಬಸವೇಶ್ವರ ವೃತ್ತ ಹಾಗೂ ಹೊಸ ಬಸ್ ನಿಲ್ದಾಣ, ಹಳೆ ನಿಲ್ದಾಣ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮೂಲಭೂತ ಸೌಕರ್ಯಗಳ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಸಮರ್ಪಕವಾಗಿ ಸಿಸಿ ಕ್ಯಾಮರಾಗಳು ಅಳವಡಿಕೆಯಾಗಿಲ್ಲ. ಕೆಲವಡೆ ಅಳವಡಿಸಿದ್ದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಈ ಕುರಿತು ನಗರಸಭೆಗೆ ಸಆಕಷ್ಟು ಪತ್ರ ಬರೆದು ತಿಳಿಸಲಾಗಿದೆ. ಸೂಕ್ತ ಸ್ಪಂಧನೆ ದೊರೆತಿಲ್ಲ. ಹೆಲ್ಮೆಟ್ ಧರಿಸದ ಕಾರಣ ನಗರದಲ್ಲಿ 15 ಕ್ಕೂ ಹೆಚ್ಚು ದುರ್ಮರಣ ಸಂಭವಿಸಿವೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.
-ನಾಗರಾಜ ಜೆ. ಸಿಪಿಐ ಶಹಾಪುರ.