ಪ್ರಮುಖ ಸುದ್ದಿ

ನಟ ಉಪೇಂದ್ರ ಸ್ಥಾಪಿಸಿದ ಕೆಪಿಜೆಪಿ ಪಕ್ಷದ ಚಿಹ್ನೆ ಯಾವುದು ಗೊತ್ತಾ?

ನಟ ಉಪೇಂದ್ರ ಸ್ಥಾಪಿಸಿದ ಕೆಪಿಜೆಪಿ ಪಕ್ಷದ ಚಿಹ್ನೆ ಯಾವುದು ಗೊತ್ತಾ?

ಹುಬ್ಬಳ್ಳಿಃ ನಮ್ಮದ್ದು ನಾಯಕರ ಪಕ್ಷವಲ್ಲ ಕಾಯಕರ ಪಕ್ಷ, ಕಾರ್ಮಿಕರ ಪಕ್ಷ. ಅದಕ್ಕಾಗಿ ನಾವು ಖಾಕಿ ಹಾಕಿದ್ದವೆ ಎಂದು ನಟ, ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ನಗರದಲ್ಲಿ ತಮ್ಮ ಪಕ್ಷ ಆಯೋಜಿಸಿದ್ದ, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ ಅವರು, ನಿನ್ನೆಯಷ್ಟೆ ನಮ್ಮ ಪಾರ್ಟಿಗೆ ಚಿನ್ಹೆ ಸಿಕ್ಕಿದೆ. ಆಟೋ ಚಿನ್ಹೆಯನ್ನ ಪಕ್ಷದ ಚಿನ್ಹೆಯನ್ನಾಗಿ ಚುನಾವಣೆ ಕಮೀಷನ್ ನೀಡಿದೆ ಎಂದರು. ಆಟೋ ಚಿನ್ಹೆ ಸಿಕ್ಕಿದ್ದು ಬಹಳ ಖುಷಿಯಾಗಿದೆ. ಆಟೋಗೆ ಹಲವಾರು ಅರ್ಥಗಳಿವೆ ಎಂದ ಅವರು,

ಮೇರುನಟ ಶಂಕರನಾಗ್ ಕನಸಿನ ಕೂಸು ಆಟೋ. ಆಟೋ ಸಾರ್ವಜನಿಕರ ಬಡವರಿಗೆ ಸಹಕಾರಿಯಾಗಿದೆ. ಆಟೋ ನಮ್ಮ ಪಕ್ಷದ ಚಿಹ್ನೆ ಸಿಕ್ಕಿರುವುದು ಸಂತಸ ತಂದಿದೆ. ಹಲವಾರು ಸಮಸ್ಯೆಗಳಿವೆ ಆದ್ರೆ ಆ ಸಮಸ್ಯೆಗಳ ಬಗ್ಗೆ ಮಾತನಾಡೋದು ಬೇಡ. ನಾನೇ ಮುಂದೆ ಎಲ್ಲವನ್ನೂ ಹೇಳುತ್ತನೆ. ನಾನು ಎನ್ನೋರು ನನ್ನ ಜೊತೆ ಬನ್ನಿ. ಇಗಿರೋ ಸಿಸ್ಟಮ್ ನ್ನೆ ಚೆಂಜ್ ಮಾಡೋಣ.

ನಮಗೆ ಕೆಟ್ಟ ಉದಾಹರಣೆ ಬೇಡ , ನಾವೇ ಒಳ್ಳೆಯ ಉದಾಹರಣೆ ಆಗೋಣ. ಶಿಕ್ಷಣ ಹಾಗೂ ವೈದ್ಯ ಕೀಯ ಸೌಲಭ್ಯಗಳು ಎಲ್ಲರಿಗೂ ಸಿಗುವಂತಗಾಬೇಕು. ಇಂತಹ ಬಹುಪಯೋಗಿ ಕೆಲಸಗಳನ್ನು ಜನಸಾಮಾನ್ಯರಿಗೆ ಸಿಗುವಂತೆ ಮಾಡಬೇಕಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇವಕ್ಕೆಲ್ಲ ಒತ್ತು ನೀಡಲಾಗಿದೆ.

ಎಲ್ಲರೂ ಅಯ್ಯೋ ಬಿಡಿ ಆಗಲ್ಲ ಎನ್ನುತ್ತಾರೆ. ಹಾಗದ್ರೆ ಈ ಸಮಾಜನ ಹೀಗೆ ಬಿಡೋದಾ…‌?ತಪ್ಪು ನಡಿತಿದ್ರು ಸುಮ್ಮನಿರೋದು ಹೇಗೆ‌. ನಾನು ಈ ಭಾರಿ ೨೨೪ ಕ್ಷೇತ್ರಗಳಲ್ಲಿಯೂ ಕಣಕ್ಕಿಕಿಳಿಸುತ್ತೇವೆ. ಗೆಲವು ಸೋಲು ಮುಖ್ಯವಲ್ಲ. ಒಂದು ಹೆಜ್ಜೆ ಮುಂದೆ ಇಡೋದೆ ನಮ್ಮ ಗೆಲವು ಎಂದರು.

Related Articles

Leave a Reply

Your email address will not be published. Required fields are marked *

Back to top button