ಪ್ರಮುಖ ಸುದ್ದಿ

ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ ವಿರುದ್ಧ ಜನಾಕ್ರೋಶ

ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ ವರ್ತನೆಗೆ ಜನಾಕ್ರೋಶ

ಹಾಸನಃ ಜಿಲ್ಲೆಯ ರಾಮನಾಥಪುರ‌ದ ಪುನರ್ವಸತಿ ಕೇಂದ್ರಕ್ಕೆ‌ ಭೇಟಿ ನೀಡಿದ ಸಚಿವ ರೇವಣ್ಣ ನಿರಾಶ್ರಿತರಿಗೆ ಬಿಸ್ಕೆಟ್ ನೀಡುವ ಬದಲು ನಾಯಿಗೆ ಎಸೆದಂತೆ ಎಸೆದಿರುವುದು‌ ಈಗ ವೈರಲ್‌ ಆಗಿದೆ.

ಮಳೆಯಿಂದಾಗಿ ತತ್ತರಿಸಿ‌ದ ಜನರು ಸರ್ಕಾರ ಅವಕಾಶ‌ ಕಲ್ಪಿಸಿದ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಂಡಿದ್ದು, ಬದುಕಿದೇವಾ ಬಡ ಜೀವಾ ಎನ್ನುವಂತಾಗಿದೆ.

ಇಂತಹ ಸ್ಥಿತಿಯಲ್ಲಿ‌ ಕಂಗಾಲಗಿದ್ದ ಜನರಿಗೆ ಸಾಂತ್ವನ‌ ಹೇಳಿ ಧೈರ್ಯ ತುಂಬಬೇಕಿದ್ದ‌ ಸಚಿವ ರೇವಣ್ಣ ನಿರಾಶ್ರಿತರಿಗೆ‌ ಬಿಸ್ಕೆಟ್ ವಿತರಣೆ ಮಾಡುವಾಗ, ಕನಿಕರ ಕಾಳಜೀಪೂರ್ವಕವಾಗಿ ವರ್ತಿಸಬೇಕಿತ್ತು.

ಅದು ಬಿಟ್ಟು ಕಾಟಚಾರಕ್ಕಾಗಿ ಬಿಸ್ಕೆಟ್ ಗಳನ್ನು ಜನರಿಗೆ ಎಸೆದಿರುವುದು ನೋವಿನ ಸಂಗತಿ. ಪುನರ್ವಸತಿ‌ ಕೇಂದ್ರದಲ್ಲಿ ಉಳಿದವರು ಭೀಕ್ಷಕರಲ್ಲ. ಅವರಿಗೂ ಸ್ವಾಭಿಮಾನವಿದೆ.

ಮಹಾ ಮಳೆಯಿಂದ ಮನೆ ಮತ್ತು ಮನೆಯವರನ್ನು ಹಣ ಆಸ್ತಿ ಅಂತಸ್ತು ಕಳೆದುಕೊಂಡು ನೊಂದುವರಿದ್ದಾರೆ. ಅವರಿಗೆ‌ ಸಾಂತ್ವನ‌ ಹೇಳಿ ಕಣ್ಣೀರು ಹೊರೆಸುವ ಬದಲು ಅಹಂಕಾರದಿಂದ ನಡೆದುಕೊಂಡಿರುವುದು ಸರಿಹಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರು ರೇವಣ್ಣನವರನ್ನು ಸಂಪರ್ಕಿಸಲು‌ಹರಸಾಹಸ ಮಾಡುವಂತಾಗಿದೆ. ಸಚಿವರು ಮೊಬೈಲ್ ಸ್ವಿಚ್ ಆಫ್ ಮಾಡಿರುವುದು ಸೋಜಿಗವಾಗಿದೆ.

ಬಿಸ್ಕೆಟ್ ಎಸೆದಿರುವುದು ತಪ್ಪು ಅಂತ ತಿಳಿದುಕೊಂಡ ಮೇಲೆ ಕೂಡಲೇ ಸಚಿವರು‌ ಕ್ಷಮೆಯಾಚನೆ ಮಾಡಬೇಕಿತ್ತು. ಅದು ಮೊಬೈಲ್‌ ಆಫ್ ಮಾಡಿದರೆ ಹೇಗೆ ಎಂಬುದು ನಾಗರಿಕರ ಪ್ರಶ್ನೆ.

Related Articles

Leave a Reply

Your email address will not be published. Required fields are marked *

Back to top button