ಬಸವಭಕ್ತಿ

ಚಂದ್ರಗ್ರಹಣ : ಮೌಢ್ಯ ವಿರೋಧಿಸಿ ಮುರುಘಾಮಠದಲ್ಲಿ ಲಿಂಗದೀಕ್ಷೆ, ಕಲ್ಯಾಣ ಮಹೋತ್ಸವ!

ದಾವಣಗೆರೆ : ಕೆಲವು ವಾಹಿನಿಗಳ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜೋತಿಷಿಗಳು ಚಂದ್ರ ಗ್ರಹಣದ ಬಗ್ಗೆ ಭೀತಿ ಸೃಷ್ಠಿಸುತ್ತಿದ್ದಾರೆ. ಚಂದ್ರಗ್ರಹಣವು ಗೃಹಗಳ ಪ್ರಾಕೃತಿಕ ಕ್ರಿಯೆ ಆಗಿದೆಯಷ್ಟೆ ಹೊರತು ಅದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ಹೀಗಾಗಿ, ಮೌಢ್ಯಾಚರಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿತ್ರದುರ್ಗದ ಮುರುಘಾಮಠದಲ್ಲಿ ಇಂದು ರಾತ್ರಿ 9ಗಂಟೆಗೆ ಲಿಂಗದೀಕ್ಷೆ ಹಾಗೂ ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ನಗರದ ಶಿವಯೋಗಿ ಮಂದಿರದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಶಿವಮೂರ್ತಿ ಮುರುಘಾ ಶರಣರು ಚಂದ್ರಗ್ರಹಣದ ಬಗ್ಗೆ ಭೀತಿ ಸೃಷ್ಟಿಸುವುದು ಸರಿಯಲ್ಲ . ಹೀಗಾಗಿ, ಮುರುಘಾಮಠ ಮೌಢ್ಯಾಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಖುದ್ದಾಗಿ ನಾನೇ ಅನೇಕ ಸಲ ಗ್ರಹಣದ ಸಂದರ್ಭದಲ್ಲಿ ಆಹಾರ ಸೇವಿಸಿದ್ದೇನೆ. ಆ ಮೂಲಕ ಮೌಢ್ಯಾಚಾರಣೆ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button