ಮನೆ ಮನೆಗೆ ಇಂಧನ ಪೂರೈಕೆ ಯೋಜನೆಗೆ ಚಾಲನೆ
ಮನೆ ಮನೆಗೆ ಬರಲಿದೆ ಡಿಸೇಲ್ ಟ್ಯಾಂಕ್
ಸಂಚಾರಿ ಡಿಸೇಲ್ ಟ್ಯಾಂಕ್ ಯೋಜನೆಗೆ ಚಾಲನೆ
ವಿವಿಡೆಸ್ಕ್ಃ ರಾಜ್ಯದಲ್ಲಿ ಬುಧವಾರ ಎರಡು ಸಂಚಾರಿ ಡಿಸೇಲ್ ಬಂಕ್ ಗಳಿಗೆ ಚಾಲನೆ ದೊರೆತಿದೆ. ಬೆಂಗಳೂರ ನಗರದಲ್ಲೊಂದು ಮತ್ತು ಇನ್ನೊಂದು ಚನ್ನರಾಯಪಟ್ಟಣ ತಾಲೂಕಿನಲ್ಲಿದೆ ಸಂಚಾರಿ ಡಿಸೇಲ್ ಬಂಕ್ ಗೆ ಚಾಲನೆ ದೊರೆತಿದೆ.
ಗ್ರಾಮೀಣ ಭಾಗಕ್ಕೆ ಸುಲಭವಾಗಿ ಇಂಧನ ಪೂರೈಸುವ ಕೇಂದ್ರದ ಮಹತ್ವದ ಯೋಜನೆ ಇದಾಗಿದ್ದು, ಅಂದಾಜು 6 ಸಾವಿರ ಲೀಟರ್ ಸಾಮರ್ಥ್ಯದ ಡಿಸೇಲ್ ಟ್ಯಾಂಕರ್ ಮನೆ ಮನೆ ಬಂದು ಇಂಧನ ಪೂರೈಸುವ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸಲಿದೆ.
ಯೋಜನೆ ಮುಖ್ಯ ಉದ್ದೇಶವೇನು ಗೊತ್ತಾ.?
ಸಂಚಾರಿ ಡಿಸೇಲ್ ಪೂರೈಕೆ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಕೈಗೊಂಡ ಕಾಮಗಾರಿಗೆ ಬೇಕಾದ ದೊಡ್ಡ ದೊಡ್ಡ ಯಂತ್ರಗಳಿಗೆ ಹಾಗೂ ಕೃಷಿ ಚಟುವಟಿಕೆಗೆ ಬಳಸುವ ಯಂತ್ರಗಳಿಗೆ ಬೇಕಾಗುವ ಡಿಸೇಲ್ ಸ್ಥಳಕ್ಕೆ ಬಂದು ವಿತರಿಸುವ ಮೂಲಕ ರೈತಾಪಿ ಜನರಿಗೆ ಅನುಕೂಲಕಲ್ಪಸಿವುದು.
ಮತ್ತು ಕಾಮಗಾರಿಗಳು ಡಿಸೇಲ್ ಖಾಲಿಯಾಗಿದೆ ಪಟ್ಟಣಕ್ಕೆ ಹೋಗಬೇಕೆಂದ ಕೆಲಸ ವಿಳಂಬವಾಗದಿರಲಿ ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.