ಪ್ರಮುಖ ಸುದ್ದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ RSS ಸಮಾವೇಶಕ್ಕೆ ಚಾಲನೆ!

ದೆಹಲಿ : ನಾಳೆ ಜೂನ್ 07ರಂದು ಮಹಾರಾಷ್ಟ್ರದ ನಾಗರಪುರ್ ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರ ಸಮಾವೇಶ ಆಯೋಜಿಸಲಾಗಿದೆ. ವಿಶೇಷ ಅಂದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಣಬ್ ಮುಖರ್ಜಿ ಅವರು ಆರ್ ಎಸ್ ಎಸ್ ಸಮಾವೇಶಕ್ಕೆ ಉದ್ಘಾಟಕರಾಗಿ ತೆರಳುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಹೊಸ ತಲ್ಲಣ ಸೃಷ್ಠಿಸಿದೆ. ಕಾಂಗ್ರೆಸ್ ಪಕ್ಷ ಆರ್ ಎಸ್ ಎಸ್ ವಿರೋಧಿಸುತ್ತಲೇ ಬಂದಿದೆ. ಆದರೆ, ಪ್ರಣಬ್ ಮುಖರ್ಜಿ ಅವರು ಸಮಾವೇಶಕ್ಕೆ ಹೋಗಿ ಉದ್ಘಾಟನಾ ಭಾಷಣ ಮಾಡಲಿದ್ದು ಇಂದೇ ನಾಗಪುರಕ್ಕೆ ತೆರಳಿದ್ದಾರೆ. ಭಾಷಣದ ವೇಳೆ ಅವರು ಹೇಳುವ ಮಾತುಗಳು ಯಾವ ಪರಿಣಾಮ ಬೀರಲಿವೆ ಎಂಬುದರ ಚರ್ಚೆ ಆರಂಭವಾಗಿದೆ.

Related Articles

Leave a Reply

Your email address will not be published. Required fields are marked *

Back to top button