ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು, ಚೀನಾಗೆ ಸ್ಪರ್ಧೆ – ಸಚಿವ ಶೆಟ್ಟರ್
ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು, ಚೀನಾಗೆ ಸ್ಪರ್ಧೆ – ಸಚಿವ ಶೆಟ್ಟರ್
ಯಾದಗಿರಿಃ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ಕೈಗಾರಿಕಾ ನೀತಿ ಕಾಯ್ದೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗಧೀಶ ಶೆಟ್ಟರ್ ತಿಳಿಸಿದರು.
ತಾಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಉದ್ಯಮ ಸ್ನೇಹಿಯಾಗಿ ಹೊಸ ಕೈಗಾರಿಕಾ ನೀತಿ ಈಗಾಗಲೇ ಪ್ರಕಟಿಸಲಾಗಿದೆ. ಬೆಂಗಳೂರ ಕೇಂದ್ರೀಕೃತ ಹೊರತುಪಡಿಸಿ ಎರಡನೇ ಮತ್ತು ಮೂರನೇಯ ಹಂತದ ನಗರಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಮತ್ತು ಹೂಡಿಕೆಗೆ ವಿಶೇಷ ಮಹತ್ವ ನೀಡಲಾಗಿದೆ.
ಪ್ರಾದೇಶಿಕವಾಗಿ ವಿಶೇಷ ಹೂಡಿಕೆ ಪಾಲಸಿಯಲ್ಲಿ ಧಾರವಾಡ, ಕಲಬುರ್ಗಿ, ಶಿವಮೊಗ್ಗ ಕೈಗಾರಿಕಾ ಕೇಂದ್ರಗಳಾಗಿ ಸ್ಥಾಪಿಸಿ ಕೈಗಾರಿಕೋಧ್ಯಮಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಅಲ್ಲದೆ ಉದ್ಯಮ ಸ್ಥಾಪನೆಗೆ ಉದ್ದಿಮೆದಾರರು ಪಡುವ ಸಂಕಷ್ಟಗಳನ್ನು ತಪ್ಪಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೊಳಿಸಿದ್ದು,₹15 ಕೋಟಿ ವರೆಗೂ ಯೋಜನೆಗಳ ಜಾರಿಗೊಳಿಸಲು ಮಂಜುರಾತಿ ನೀಡುವ ಅಧಿಕಾರ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
₹15 ಕೋಟಿಗೂ ಹೆಚ್ಷಿನ ಮೊತ್ತದ ಯೋಜನೆಗಳಿ ತಾವು ಒಳಗೊಂಡಂತೆ ಸಿಎಂ ನೇತೃತ್ವದ ಸಮಿತಿ ಒಪ್ಪಿಗೆ ನೀಡಲಿದೆ.
ಅಲ್ಲದೆ ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರ 100 ಎಕರೆವರೆಗೂ ಉದ್ಯಮದಾರರು ಭೂಮಿ ಖರೀಧಿಸಬಹುದು.
ಇದರಿಂದ ಕೈಗಾರಿಕೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುದಿಲ್ಲ ಎಂದರು.
ಮತ್ತು ಕಡೇಚೂರಿನಲ್ಲಿ 15 ಕಂಪನಿಗಳು ಆರಂಭವಾಗಲಿವೆ. ಕೇಂದ್ರ ಸರ್ಕಾರ ದೇಶದ 4-5 ಕಡೆ ಫಾರ್ಮ್ ಪಾರ್ಕ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಕಡೆಚೂರ ಕೈಗಾರಿಕಾ ಪ್ರದೇಶದಲ್ಲಿ ಬಲ್ಕ್ ಡ್ರಗ್ ಫಾರ್ಮ್ ಪಾರ್ಕ್ ಸ್ಥಾಪನೆಗೆ ಪ್ರಧಾನಿ ಮೋದಿಜಿಯವರಿಗೆ, ಸಂಸದ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಸೇರಿದಂತೆ ಪ್ರಮುಖರ ನಿಯೋಗ ಭೇಟಿ ಮಾಡಿ ಮನವಿ ಮಾಡಲಾಗುವದು ಎಂದು ಶೆಟ್ಟರ್ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಶಾಸಕ ವೆಂಕಟರಡ್ಡಿ ಮುದ್ನಾಳ ಸೇರಿಂದತೆ ಇತರರು ಇದ್ದರು.
ಚೀನಾಗೆ ಸ್ಪರ್ಧೆಃ ಪ್ರಧಾನಿ ಮೋದಿಜಿ ಹೇಳಿದಂತೆ ನಮ್ಮ ದೇಶದಲ್ಲಿ ಆಟಿಕೆ ಸಾಮಾಗ್ರಿಗಳ ತಯಾರಿಕೆಗೂ ಒತ್ತು ನೀಡಲಾಗುತ್ತದೆ. ಪ್ರತಿಯೊಂದನ್ನು ದೇಶದಲ್ಲಿಯೇ ತಯಾರಿಸುವಕಾರ್ಯ ನಡೆಯಲಿದೆ. ಅದಕ್ಕೆ ಬೇಕಾದ
ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು. ಚೀನಾಕ್ಕೆ ಸ್ಪರ್ಧೆವೊಡ್ಡುವ ಕಾರ್ಯೋನ್ಮುಖವಾಗಿ ದೇಶವನ್ನು ಸ್ವಾವಲಂಬಿಯಾಗಿ ಕಟ್ಟಬೇಕಿದೆ ಎಂದರು.