ಪ್ರಮುಖ ಸುದ್ದಿ

ಇವಿಎಂ ಮಷೀನ್ ಬಗ್ಗೆ ಸಚಿವ ಖರ್ಗೆ ಹೇಳಿದ್ದೇನು ನೋಡಿ!

ಕಲಬುರಗಿ: ಇವಿಎಂ ಮತಯಂತ್ರಗಳ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಚರ್ಚಿಸಲಾಗಿದೆ.ವೈಜ್ಞಾನಿಕ ಮನೋಭಾವ ಇರುವವರು ಇವಿಎಂ ಬಗ್ಗೆ ಪ್ರಶ್ನೆ ಮಾಡಲೇಬೇಕಿದೆ. ಅನುಮಾನದ ಬಗ್ಗೆ ಚುನಾವಣ ಆಯೋಗ ಉತ್ತರಿಸಬೇಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನಮ್ಮ ರಾಜ್ಯದಲ್ಲೂ ಅನೇಕ ಉತ್ತಮ ತಂತ್ರಜ್ಞಾನವುಳ್ಳ ಸಂಸ್ಥೆಗಳಿವೆ. ಅಂಥ ಸಂಸ್ಥೆಗಳ ಮೂಲಕ ಇವಿಎಂಗಳ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕಿದೆ. ಅಲ್ಲದೆ ಸಾರ್ವಜನಿಕ ಪರೀಕ್ಷೆಗೆ ನೀಡಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವ ಖರ್ಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button