ವಿನಯ ವಿಶೇಷ

ಶಹಾಪುರದಲ್ಲಿ ಸಂಕ್ರಾಂತಿ ಸಂಭ್ರಮ-ಸಿಂಗಾರಗೊಂಡ ನಗರ

ಜೋಡು ಪಲ್ಲಕ್ಕಿ ಮೆರವಣಿಗೆ ಸಿಂಗಾರಗೊಂಡ ನಗರ

ಮಲ್ಲಿಕಾರ್ಜುನ ಮುದನೂರ

ಯಾದಗಿರಿ. ಶಹಾಪುರಃ ಸಂಕ್ರಾಂತಿ ಹಬ್ಬ ಅಂಗವಾಗಿ ಪ್ರತಿವರ್ಷ ನಗರದಲ್ಲಿ ನಡೆಯುವ ಭೀ.ಗುಡಿಯ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರ ಪಲ್ಲಕ್ಕಿ ಮೆರವಣಿಗೆ ನಿಮಿತ್ತ ಇಲ್ಲಿನ ಗಂಗಾನಗರದ ಬಲಭೀಮೇಶ್ವರ ಯುವಕ ಸಂಘ ನಗರದ ಮಾರುತಿ ರಸ್ತೆ, ಗಂಗಾ ನಗರ ಮಾರ್ಗ ಅಲಂಕಾರಿಕ ಪ್ರವೇಶದ್ವಾರ ನಿರ್ಮಾಣ ಮಾಡಿದ್ದಲ್ಲದೆ ಕೇಸರಿ ಪರಾರಿ, ಧ್ವಜಗಳಿಂದ ಸಿಂಗರಿಸಿದ್ದಾರೆ. ಅದೇ ರೀತಿ ದಿಗ್ಗಿ ಬೇಸ್ ಮತ್ತು ಗಾಂಧಿಚೌಕ ರಸ್ತೆಗಳೆಲ್ಲಡೆ ಭಕ್ತಾಧಿಗಳು ಕೇಸರಿ ಪರಾರಿ ಧ್ವಜಗಳು ರಾರಾಜಿಸುವಂತೆ ಮಾಡಿದ್ದಾರೆ ಎಲ್ಲಡೆ ದೀಪಾಂಲಕರದ ಬೆಳಕು ಗೋಚರಿಸುತ್ತಿದೆ.

ಅಲ್ಲದೆ ಮೋಚಿ ಗಡ್ಡಾ ಗುತ್ತಿಪೇಠ ಮಾರ್ಗ ಮತ್ತು ಬಸವೇಶ್ವರ ವೃತ್ತದಲ್ಲಿ ಬಲಭೀಮೇಶ್ವರ ದೊಡ್ಡ ಕಟೌಟ್‍ಗಳು ಮತ್ತು ಯುವಕರ, ಗಣ್ಯರ ಸಂಕ್ರಾತಿ ಹಬ್ಬದ ಶುಭಾಶಯ ಕೋರಿದ ಫ್ಲೆಕ್ಸ್ ಗಳು ಅಳವಡಿಸಲಾಗಿದೆ.

ಬಸವೇಶ್ವರ ವೃತ್ತ, ಮಾರುತಿ ರಸ್ತೆ ಅಲಂಕಾರಿಕ ಪ್ರವೇಶ ದ್ವಾರ ನಿರ್ಮಾಣ ಮಾಡಿದ್ದು, ಆಗಮಿಸುವ ಭಕ್ತರನ್ನು ಆಕರ್ಷಿಸುತ್ತಿದೆ. ಇಡಿ ಪಟ್ಟಣ ಸಂಕ್ರಾಂತಿ ನಿಮಿತ್ತ ನಗರದಲ್ಲಿ ನಡೆಯುವ ದಿಗ್ಗಿ ಸಂಗಮೇಶ್ವರ ಮತ್ತು ಭೀಮರಾಯನ ಗುಡಿ ಬಲಭೀಮೇಶ್ವರರ ಪಲ್ಲಕ್ಕಿ ಮೆರವಣಿಗೆಗಾಗಿ ಅದ್ದೂರಿ ತಯಾರಿ ನಡೆದಿದೆ.

ಜ.15 ಮಂಗಳವಾರ ೆರಡು ಪಲ್ಲಕ್ಕಿಗಳು ಬೆಳಗ್ಗೆ ದಿಗ್ಗಿಬೇಸ್ ಮೂಲಕ ಪುರ ಪ್ರವೇಶ ಮಾಡಲಿವೆ. ಈ ಮೂಲಕ ಹುರಸಗುಂಡಗಿಯ ಹತ್ತಿರದ ಭೀಮಾನದಿಗೆ ಗಂಗಾ ಸ್ನಾನಕ್ಕೆಂದು ತೆರಳಲಿವೆ. ನಂತರ ವಾಪಾಸ್ ನಗರ ಪ್ರವೇಶಿಸುತ್ತಿದ್ದಂತೆ  ರಾತ್ರಿ ಬೆಳಗಿನ ಜಾವದವರೆಗೂ ಪಟ್ಟಣದಲ್ಲಿ ನಡೆಯುವ ಜೋಡು ಪಲ್ಲಕ್ಕಿಗಳ ಮೆರವಣಿಗೆ ಬಹು ಆಕರ್ಷಿತವಾಗಿರುತ್ತದೆ.

ದೀಪದ ದಿವಟಿಗೆಗಳ ಸಾಲು. ವಿದ್ಯುತ್ ದೀಪದ ಸಾಲು ಬೆಳಕಿನಲ್ಲಿ ದೇವರ ಮೆರವಣಿಗೆ. ಸಾವಿರಾರು ಭಕ್ತರು ಸಮಕ್ಷಮದಲ್ಲಿ ಭಜನೆ, ಹಾಡು ಕುಣಿತ ಹರಕೆ ತೀರಿಸಲು ಹಾಖುವ ದೀಡ ನಮಸ್ಕಾರ, ಹಲಗೆ ನಾದ ರಾತ್ರಿಯಲ್ಲಿ ಪಟಾಕಿಗಳ ರಂಗು ರಂಗಿನ ಹಾರಾಟ ಮನೆ ಮಾಡಿರುತ್ತದೆ. ನೋಡಲು ಅತ್ಯಾಕರ್ಷಕವಾಗಿರುತ್ತದೆ. ಮಹಾರಾಷ್ಟ್ರ, ಆಂದ್ರ ಸೇರಿದಂತೆ ಸುತ್ತಲಿನ ಜಿಲ್ಲೆಗಳ, ಹಳ್ಳಿಯಿಂದ ಜನ ಸೇರುತ್ತಾರೆ.

ಬುಧವಾರ ಬೆಳಗಿನ ಜಾವ ದಿಗ್ಗಿಬೇಸ್ ದಾಟುತ್ತಿರುವಂತೆ ಬಲಭೀಮೇಶ್ವರರ ಪಲ್ಲಕ್ಕಿ ಮುಂದೆ ಪೂಜಾರಿಗಳು ಕಾರಣಿಕ ನುಡಿಯಲಿದ್ದಾರೆ. ರೈತಾಪಿ ಜನರು ಇಲ್ಲಿನ ಕಾರಣಕ ನುಡಿಯಂತೆ ಕೃಷಿ ಚಟುವಟಿಕೆ ನಡೆಸಲಿದ್ದಾರೆ. ಹೀಗಾಗಿ ಬೆಳಗಿನ ಜಾವ ರೈತಾಪಿ ಜನ ಕಾರಣಿಕ ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ನೆರದಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button