ಮುನಿಸಿಗೂ ಮುನ್ನೂರು ಭಾವಗಳು….
ಮುನಿಸು-ಮನಸ್ಸು-ಭಾವನೆ
ಮುನಿಸು ಬೇಕು ಮನಸಿಗೆ
ಪ್ರೀತಿಯಿರುವ ಕನಸುಗಳಿಗೆ
ಭಾವನೆಗಳ ನೆನಸುವಿಕೆಗೆ
ಮೌನವಾಗಿದ್ದು ನೋಡು ಓಡುವದಿದು
ಕೋಪ ಮಾಡದಿರೆ ಹೇಗೆ ಅವ್ವ
ಮಕ್ಕಳ ತುಂಟಾಟ ಸಹಿಸಲುಂಟೆ
ಹಠದ ಮುಂದೆ ಬಿಗುವಾಗಬೇಕು
ಆಗಾಗ ರಮಿಸುತ ಗೆಲುವಾಗಿಸಬೇಕು
ಅಪ್ಪ ಬಂದನೆಂದು ಪುಸ್ತಕ ಹಿಡಿಯುವರು
ಟಿವಿ ಯಿಂದ ಹಿಂದೆ ಸರಿಯುವರು
ಶಿಸ್ತಿನ ಸಿಪಾಯಿಗಳಾಗುವರು ಮಕ್ಕಳು
ಸಿಡುಕುತ ಜೀವನ ಪಾಠ ಕಲಿಸುವನು ತಂದೆ
ಮೇಷ್ಟ್ರು ಹಿಡಿಯದಿರೆ ಕೈನಲಿ ಬೆತ್ತ
ಎಲ್ಲೆಲ್ಲಿಯೊ ಅಲಿಯುವದು ಹುಡುಗರ ಚಿತ್ತ
ಜ್ಞಾನ ತುಂಬುವರು ನೆತ್ತಿಯ ಭಿತ್ತಿಯಲಿ
ಸುಜ್ಞಾನಿಗಳಾಗುವರು ಮಕ್ಕಳು ಈ ಜಗದಲಿ
ಸಂತರಿಗೂ ಸಾಧುಗಳಿಗೂ ಬರುವದು ಕೋಪ
ಹಾಲಮೇಲಿನ ಉಕ್ಕಿನಂತೆ ತಾಪ
ಹನಿನೀರು ಸಿಂಪಡಿಸಿದರೆ ಜರಗುವದು ಜರ್ರನೆ
ಇಂತಿಪ್ಪ ಮುನಿಗಳ ಮುನಿಸು ಸೊಗಸು
ಹಿರಿಯರ ತುಸುಕೋಪ ತ್ರಾಸಲ್ಲ
ಮನೆ ಬೆಳಗಲು ಅವರ ನುಡಿ ಬೇಕಲ್ಲ
ಸಿಟ್ಟು ಸೆಡವು ಮರೆತರ ಜೀವನ ನಂದನ
ಕೂಡಿ ಬಾಳಿದರೆ ಬದುಕು ಚಂದನ.
ಹಗೆಬೇಡ ಈ ಧರೆಯಲಿ ಎಂದಿಗೂ
ಸಗೆಸಂಭಂಧಿಗಳಾಗಿರಬೇಕು ಎಂದೆಂದಿಗೂ
ಹಠ ಕೋಪ ತಾಪ ಬಿಗುಮಾನ ಏನೇ ಇರಲಿ
ಒಂದಾಗಿ ಬಂಧುರವಾಗಿ ಬದುಕೋಣ ಧರೆಯಲಿ
-ಜಯಶ್ರೀ ಭ.ಭಂಡಾರಿ.
ಬಾದಾಮಿ.
9986837446.
ಜಯಶ್ರೀ ಮೇಡಂ ಅವರ * ಮುನಿಸು – ಮನಸ್ಸು -ಭಾವನೆ * ಒಂದು ಉತ್ತಮ ಕವನ ” ಕೋಪ ತಾಪ, ಮುನಿಸು ಪ್ರೀತಿ ಗೌರವ ಎಲ್ಲವನ್ನೂ ತಂದೆ-ಮಗ,ವಿದ್ಯಾರ್ಥಿ -ಶಿಕ್ಷಕ,ಗುರು -ಶಿಷ್ಯ, ಹೀಗೆ ಅವರವರ ಸಂಬಂಧಕ್ಕನುಗುಣವಾಗಿ ಭಾವನೆಗಳಾಗಿ ಬೆರೆತಾಗ ಅವರ ನಿಷ್ಠೆ ಇಮ್ಮಡಿಸಿ ತಮ್ಮ ತಮ್ಮ ಕರ್ತವ್ಯಗಳಲ್ಲಿ ಜಯ ಸಾಧಿಸಿತ್ತಾರೆ ಎಂಬ ನೀತಿಯಿಂದ ಕೂಡಿದೆ. ** ಬೆತ್ತ ಹಿಡಿಯದ ಪಿತ ಪುತ್ರನಿಗೆ ಶತ್ರು ** ಎನ್ನುವ ನುಡಿಯಂತೆ ತಪ್ಪು ಮಾಡಿದಾಗ ಶಿಕ್ಷೆ ವಿಧಿಸುವುದು ಧರ್ಮ.