ರಾಷ್ಟ್ರ ಹಿತಕ್ಕಾಗಿ ಮೋದಿಜಿಯವರನ್ನು ಬೆಂಬಲಿಸಿ
ಶಹಾಪುರಃ ಮನೆ ಮನೆ ಬಿಜೆಪಿ ಪ್ರಚಾರ
ಶಹಾಪುರಃ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಷ್ಟ್ರದ ಹಿತಕ್ಕಾಗಿ ಮೊತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಮೋದಿಜೀಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮಾಜಿ ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಮನೆ ಮನೆಗೆ ತೆರಳಿ ಮತದಾರರಲ್ಲಿ ಮನವಿ ಮಾಡಿದರು.
ನಗರದ ವಾರ್ಡ್ ಸಂಖ್ಯೆ 16 ಮತ್ತು 17 ರಲ್ಲಿ ಮನೆ ಮನೆಗೆ ತೆರಳಿ ರಾಯಚೂರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಮತಯಾಚನೆ ಮಾಡಿದರು.
jahiraatu
ಮೋದಿಜಿಯವರು ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಬಡವರು ರೈತರ ಉದ್ಧಾರಕ್ಕಾಗಿ ಒತ್ತು ನೀಡಿದ್ದಾರೆ. ಉಚಿತ ಸಿಲಿಂಡರ್, ಮನೆ ಮನೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ರೈತರಿಗೆ ವಾರ್ಷಿಕ 6000 ರೂ. ಅವರ ಅಕೌಂಟಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಮತ್ತು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ವಿಶೇಷ ಚಿಂತನೆ ಮಾಡಿದ್ದು, ಅಲ್ಲದೆ ನಿವೃತ್ತ ರೈತರಿಗೂ ಅಂದರೆ 60 ವರ್ಷ ಮೀರಿದ ರೈತರಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಲಿದ್ದಾರೆ ಎಂದು ಮತದಾರರಿಗೆ ಮನವರಿಕೆ ಮಾಡಿದರು.
ಅಲ್ಲದೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲಿದ್ದಾರೆ. ದೇಶದ ಸೇನೆಯನ್ನು ಬಲಿಷ್ಠಗೊಳಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುನ್ನಡೆ ಬರೆದಿದ್ದಾರೆ. ವಿಶ್ವದಲ್ಲಿ ಭಾರತವನ್ನು ಮುಂದುವರೆದ ದೇಶದ ಪಟ್ಟಿಯಲ್ಲಿ ನಾಲ್ಕನೇಯ ಸ್ಥಾನಕ್ಕೆ ತಂದಿರುವದು ಮೋದೀಜಿಯವರ ಬಹುದೊಡ್ಡ ಸಾಧನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ ದೊಡ್ಮನಿ, ರಡ್ಡಿ ಸಗರ, ರಾಜುಗೌಡ, ಈರಪ್ಪ ಶಹಾಪುರ ಪೇಠ, ನಿಂಗಪ್ಪ ಪೂಜಾರಿ, ಮಲ್ಲಣಗೌಡ, ಹಯ್ಯಾಳಪ್ಪ ನಾಳವಡಿಗಿ, ಶೇಖಪ್ಪ, ನಿಂಗಪ್ಪ, ಮಹಾದೇವಪ್ಪ ಪೂಜಾರಿ, ಯಂಕಪ್ಪ, ಸಿದ್ದಯ್ಯ ಸ್ವಾಮಿ ಸಜ್ಜನ, ಸೋಮಶೇಖರ ಸಜ್ಜನ್, ದತ್ತು ಇತರರು ಇದ್ದರು.