ಪ್ರಮುಖ ಸುದ್ದಿ

ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ-ಸಿದ್ರಾಮಯ್ಯ

ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ- ಸಿದ್ರಾಮಯ್ಯ

ಹುಣಸೂರಃ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ಬಡವರಿಗೆ 10 ಕೆ.ಜಿ ಅಕ್ಕಿ ಕೊಡುತ್ತೇವೆ. ರಾಜಕಾರಣ ಜನಸೇವೆಗೆ ಇರುವ ಸಾಧನ ಅಂತ ನಂಬಿದವರು ನಾವು. ಹಣ-ಅಧಿಕಾರದ ಸ್ವಾರ್ಥ ಸಾಧನೆಗಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವವರಿಗೆ ಜನ ಮತ ನೀಡಬಾರದು ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಅಲ್ಲದೆ ಎಚ್.ವಿಶ್ವನಾಥ ನಾನು ಸಿಎಂ ಆಗಿದ್ದಾಗಲು ಬಿಡಲಿಲ್ಲ. ನನ್ನನ್ನು ಸಿಎಂ ಸ್ಥಾನದಿಂದ  ಇಳಿಸಿ ಎಂದು ಹೈಕಮಾಂಡಗೆ ಲೆಟರ್ ಬರೆದಿದ್ದರು. ಹೀಗಾಗಿ ಇಂತವರಿಗೆ ಮತ ಹಾಕಬೇಡಿ ಎಂದು ಅವರು ಹುಣಸೂರ ಕ್ಷೇತ್ರದ ಜನರಿಗೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಜನಸಾಗರದಂತೆ ಬರುತ್ತಿರುವದನ್ನು ನೋಡಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿದೆ. ಈ ಬಾರಿ ಮತದಾರರು ಯೋಚಿಸಿ ಮತದಾನ ಮಾಡಲಿದ್ದಾರೆ. ಪಕ್ಷಾಂತರಿಗಳಿಗೆ ಪಾಠ ಕಲಿಸಲಿದ್ದಾರೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button