ಪ್ರಮುಖ ಸುದ್ದಿ

ಸೋಂಕಿತನ ಮೃತದೇಹ ಎಳೆತಂದ ಪರಿಃ ನಾಯಿಗಿಂತ ಕಡೆಯಾಯಿತೇ.? ಮಾನವ ಜನ್ಮ.?

ಪ್ರಾಣಿಗಿಂತ ಕಡೆ‌ ಸೋಂಕಿತನ ಅಂತ್ಯಕ್ರಿಯೆ ಪರಿ
ಯಾದಗಿರಿಃ ಬಳ್ಳಾರಿಯಲ್ಲಿ ಮೃತಪಟ್ಟ‌ ಕೊರೊನಾ ಸೋಂಕಿತನ ಅಂತ್ಯಕ್ರಿಯೆ ನಡೆಸಿದ ಅಮಾನವೀಯ ಘಟನೆ ಮಾಸುವ ಮುನ್ನವೇ ಅದಕ್ಕಿಂತ ಬೀಕರ ಸೋಂಕಿತನ ಅಂತ್ಯಕ್ರಿಯೆ ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರ ಜಿಲ್ಲೆಯ ಸಿರವಾರದಲ್ಲಿ ರವಿವಾರ ಮಗಳ‌‌ ಮದುವೆ ಮುಗಿಸಿ ನಂತರ ಕೊರೊನಾ ಪಾಸಿಟಿವ್ ತಗುಲಿರುವ ಹಿನ್ನೆಲೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ‌ ಕಾರಣ, ಸ್ವಂತ ಗ್ರಾಮವಾದ ನಗರ ಸಮೀಪದ ಹೊನಗೆರ ಗ್ರಾಮಕ್ಕೆ ಸೋಂಕಿತನ ಮೃತದೇಹ ತಂದಿದ್ದು ಅಂತ್ಯಕ್ರಿಯೆಯನ್ನು ಮೃತನ ಸಹೋದರನ ಹೊಲದಲ್ಲಿ ಮಾಡಲಾಗಿದ್ದು, ಅಂತ್ಯಕ್ರಿಯೆ ಮಾಡುವ ಪರಿ ಅಮಾನವೀಯ ವಾಗಿ ಕಂಡು ಬಂದಿದೆ.

ಸೋಂಕಿತನ ಮೃತ ದೇಹವನ್ನು ಬಡಿಗೆಯೊಂದಕ್ಕೆ ಕಟ್ಟಿ ಎಳೆ ತರುತ್ತಿರುವದು ನೋಡಿದರೆ ಮನುಷ್ಯತ್ವವೇ ಉಳಿದಿಲ್ಲ ಎನಿಸುತ್ತದೆ. ಮೃತರ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರನ್ನು ಪ್ರತ್ಯೇಕವಾಗಿರಿಸಲಾಗಿದೆ. ಹೀಗಾಗಿ ಮೃತನ ಸಹೋದರ ಹೊರತು ಪಡಿಸಿ ಉಳಿದ ಸಂಬಂಧಿಕರಾರು ಇರಲಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಅಮಾನವೀಯವಾಗಿ ಕಟ್ಟಿಗೆಯೊಂದಕ್ಕೆ ಮೃತನ ದೇಹವನ್ನೆ ಎಳೆ ತರುವದು ಪ್ರಾಣಿಗಳಿಗಿಂದ ಕಡೆಯಾಗಿದೆ ಎಂಬ ಬೇಸರದ ಮಾತುಗಳು ಎಲ್ಲಡೆ ಕೇಳಿ ಬರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button