ಪ್ರಮುಖ ಸುದ್ದಿ

ಪ್ರಜಾಪ್ರಭುತ್ವದಲ್ಲಿ ರಾಜರ ದರ್ಬಾರ ನಡೆಯಲ್ಲ : ಸಿ.ಟಿ.ರವಿ

ಸಮಾಜಕ್ಕೆ ರಾಜೂಗೌಡರಂಥ ನಾಯಕತ್ವ ಅಗತ್ಯ – ಸಿ.ಟಿ. ರವಿ

ಯಾದಗಿರಿಃ ಕಾಂಗ್ರೆಸ್ ಸರ್ಕಾರ ಅಪರಾಧ, ಅತ್ಯಾಚಾರ ಮತ್ತು ರೈತರ ಆತ್ಮಹತ್ಯೆ ಅಲ್ಲದೆ ಸಾಲ ಮಾಡುವದರಲ್ಲೂ ಇಡಿ ದೇಶದಲ್ಲಿ ನಂ,1 ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೂಲಕ ರಾಜ್ಯದ ಜನರನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಬಿಜೆಪಿ ಫೈರ್ ಬ್ಯಾಂಡ್ ಸಿ.ಟಿ.ರವಿ ಹೇಳಿದರು.

ಜಿಲ್ಲೆಯ ಸುರಪುರದಲ್ಲಿ ನಡೆದ ನವ ಕರ್ನಾಟಕಕ್ಕಾಗಿ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕವನ್ನು ಇಲ್ಲಿವರೆಗೆ ಆಳಿದ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಒಟ್ಟು ಸಾಲಕ್ಕಿಂತ ದುಪ್ಪಟ್ಟು ಸಾಲವನ್ನು ಈ ನಿದ್ರಾಮಯ್ಯ ಒಬ್ಬರೇ ಮಾಡಿದ್ದಾರೆ. ಇಡಿ ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದು, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಲ್ಲಿ ನಡೆಯುವ ಚುನಾವಣೆಯ ಖರ್ಚಿಗಾಗಿ ಕಾಂಗ್ರೆಸ್ ನ ಹೈಕಮಾಂಡ ಬೊಕ್ಕಸವನ್ನು ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ‘ನಿದ್ರಾಮಯ್ಯ’ ಒಬ್ಬರೇ 2 ಲಕ್ಷ 40 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದಲ್ಲಿ ಸಾಲ ಮಾಡಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಈ ನಿದ್ರಾಮಯ್ಯ ಕಾರಣರಾಗಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೆ ಅನ್ನಭಾಗ್ಯಕ್ಕೆ ದೇಶದ ಪ್ರಧಾನಿಯವರಿಂದ 32 ರೂ.ಪಡೆದುಕೊಂಡು ರಾಜ್ಯದಿಂದ ಕೇವಲ 3 ರೂ ಹಾಕುವ ನಿದ್ರಾಮಯ್ಯ ಅನ್ನಭಾಗ್ಯ ಉಚಿತ ದವಸ ಧಾನ್ಯ ನೀಡಿದ್ದೇನೆ ಎಂದು ದೊಡ್ಡದು ಫೋಟೊ ಹಾಕೊಂಡು ಜಂಬ ಕೊಚ್ಚಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು ಎಂದು ಕುಟುಕಿದರು.

ಇನ್ನು ಸುರಪುರದ ರಾಜಕೀಯಕ್ಕೆ ಬಂದರೆ, ದುಡಿಯುವ ಎತ್ತಿಗೆ ಎಲ್ಲರೂ ಓಟು ಹಾಕಬೇಕು. ದುಡಿಯದೇ ಕೈಲಾಗದ ಗೊಡ್ಡೆತ್ತಿಗೆ ನೀವೆ ದುಡಿದದ್ದನ್ನು ಉಂಡು ಅದು ಹಾಕುವ ಸಗಣಿ ಸಹ ನಿಮ್ಮ ಹೊಲದಲ್ಲಿ ಹಾಕುವದಿಲ್ಲ ವಾಪಾಸ್ ತನ್ನ ಮನೆಗೆ ಹೋಗಿ ಸಗಣಿ ಹಾಕುವಂತ ಗೊಡ್ಡೆತ್ತಿಗೆ ಎಷ್ಟು ಮಾಡಿದರು ಪ್ರಯೋಜನವಿಲ್ಲ ಎಂದು ಸಿ.ಟಿ.ರವಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ರಾಜದರ್ಬಾರ ನಡೆಯಲ್ಲ. ಏನಿದ್ದರು ಪ್ರಭುಗಳದ್ದೆ ಆಡಳಿತ. ಹೀಗಾಗಿ ನಮ್ಮ ಸಹೋದರ ಬಿಜೆಪಿಯ ರಾಜೂಗೌಡರು ಜನರ ಒಡನಾಡಿಯಾಗಿ ಬದುಕುವವರು. ಜನರ ಕಷ್ಟ ಸುಖದಲ್ಲಿ ಭಾಗಿಯಾಗುವವರು. ಜನಹಿತ ಬಯಸುವ ರಾಜನಾಗಿದ್ದಾನೆ. ಎಲ್ಲರ ಪ್ರೀತಿಯ ರಾಜುಗೌಡರಾಗಿದ್ದಾರೆ ಈ ಬಾರಿ ಬಿಜೆಪಿಯಿಂದ ರಾಜುಗೌಡರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಹಕರಿಬೇಕೆಂದ ಕೋರಿದರು.

Related Articles

Leave a Reply

Your email address will not be published. Required fields are marked *

Back to top button