ಭಾರತ ಬಂದ್ಃ ಚಿಕ್ಕಬಳ್ಳಾಪುರ ದಲ್ಲಿ ಕಾರ್ಯಕರ್ತರ ಗುಂಡಾಗಿರಿ ವ್ಯಾಪಾರಿ ಮೇಲೆ ಹಲ್ಲೆ
ವಿವಿ ಡೆಸ್ಕ್ಃ ವಿವಿಧ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆ ಈಡೇರಿಕೆ ಆಗ್ರಹಿಸಿ ಇಂದು ಭಾರತ ಬಂದ್ ಕರೆ ನೀಡಿರುವ ಹಿನ್ನೆಲೆ ಬೆಂಗಳೂರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ದೊರೆತಿರುವದಿಲ್ಲ ಆದರೆ ರಸ್ತೆ ಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.
ಬೆಂಗಳೂರಿನ ಮೆಜೆಸ್ಟಿಕ್ ನಲ್ಲೂ ಜನ ಸಂಖ್ಯೆ ವಿರಳ, ಆದರೆ ಖಾಸಗಿ ಬಸ್ ಮತ್ತು ಸರ್ಕಾರಿ ಬಿಎಂಟಿಸಿ ಬಸ್ ಖಾಲಿ ಖಾಲಿಯಾಗಿ ಸಂಚರಿಸುತ್ತಿರುವದು ಕಂಡು ಬರುತ್ತಿದೆ. ಬಹುತೇಕ ಜನರ ಬಂದ್ ಬಿಸಿ ನೋಡಿ ಹೊರಗಡೆ ಬರುವ ಸಾಧ್ಯತೆ ಕಂಡು ಬರುತ್ತಿದೆ.
18 ಸಂಘಟನೆಗಳು ಸೇರಿಕೊಂಡು ಬಂದ್ ಕರೆ ನೀಡಲಾಗಿದ್ದು, ಬಹುತೇಕ ಕಡೆ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಬಂದ್ ಪ್ರಕ್ರಿಯೆ ಯಶಸ್ವಿಯಾಗಿ ಕಂಡು ಬಂದಿಲ್ಲ.
ಮಡಿಕೇರಿಯಲ್ಲಿ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಎಲ್ಲಡೆ ಶಾಲಾ ಕಾಲೇಜುಗಳು ಎಂದಿನಂತೆ ಶುರುವಾಗಿದ್ದು, ಆಟೋಗಳು ಓಡಾಡುತ್ತಿವೆ. ರಾಜ್ಯದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನ ರಸೇಲ್ ಮಾರ್ಕೇಟ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ. ಬಹುತೇಕ ಮಾರ್ಕೆಟ್, ಹೊಟೇಲ್ ಗಳು ತೆರೆದಿವೆ.
ಸಿಪಿಐಎಂ ಕಾರ್ಯಕರ್ತರ ಗೂಂಡಾಗಿರಿ
ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ಸಿಪಿಐಎಂ ಕಾರ್ಯ ಕರ್ತರು ಅಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ಮಾಲೀಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಅಂಗಡಿಗಳನ್ನು ಗುಂಡಾಗಿರಿ ಮಾಡಿ ಮುಚ್ಚಿಸಲಾಗುತ್ತಿದೆ ಎಂದು ಇಲ್ಲಿನ ವ್ಯಾಪಾರಸ್ಥರು ದೂರಿದ್ದಾರೆ.