ಪ್ರಮುಖ ಸುದ್ದಿ
ರಾಜನಲ್ಲ ರಾಜಗುರು ಆಗಲು ಬಯಸುವೆ : ಕಾಗಿನೆಲೆ ಸ್ವಾಮೀಜಿ
ದಾವಣಗೆರೆ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿ ಪದವಿಗೇರಿದ್ದಾರೆ. ಕಾವಿಧಾರಿಯ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದ ಬಳಿಕ ಇತ್ತ ಕರ್ನಾಟಕದಲ್ಲೂ ಅನೇಕ ಮಠಾಧೀಶರು ರಾಜಕೀಯ ಪ್ರವೇಶ ಬಯಸಿದ್ದಾರೆ. ಕೆಲವರು ಬಹಿರಂಗವಾಗಿಯೇ ರಾಜಕೀಯ ಅಖಾಡಕ್ಕಿಳಿಯುವ ಮಾತನಾಡಿದ್ದಾರೆ. ಇನ್ನೂ ಕೆಲವರು ತೆರೆಮರೆಯಲ್ಲಿ ಪ್ರಬಲ ರಾಜಕೀಯ ಪಕ್ಷಗಳ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ.
ಆದರೆ, ಈ ಬಗ್ಗೆ ಕಾಗಿನೆಲೆ ಕನಕ ಗುರುಪೀಠದ ಪೀಠಾದ್ಯಕ್ಷರಾದ ನಿರಂಜನಾನಂದಪುರಿ ಸ್ವಾಮೀಜಿಗಳನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಮಾದ್ಯಮದ ಮಂದಿ ಕೇಳಿದಾಗ ನನಗೆ ರಾಜನಾಗುವ ಬಯಕೆ ಇಲ್ಲ. ಕನಸಿನಲ್ಲೂ ಸಹ ರಾಜಕಾರಣಕ್ಕೆ ಹೆಜ್ಜೆಯಿಡುವ ಬಗ್ಗೆ ಚಿಂತನೆ ಮಾಡಿಲ್ಲ. ಆದರೆ, ರಾಜಗುರು ಆಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.