ಪ್ರಮುಖ ಸುದ್ದಿ

ಜ್ಞಾನದ ಜೊತೆಗೆ ಸಮಯ ಪ್ರಜ್ಞೆಯು ಇರಲಿ- ಮುದ್ನೂರ

ಎಸ್‍ಎಂಸಿ ಜೈನ್ ಶಾಲೆಃ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಜ್ಞಾನದ ಜೊತೆಗೆ ಸಮಯ ಪ್ರಜ್ಞೆಯು ಇರಲಿ

ಎಸ್‍ಎಂಸಿ ಜೈನ್ ಶಾಲೆಃ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ವಿನಯವಾಣಿ ಸುದ್ದಿ
Yadgiri, ಶಹಾಪುರಃ ವಿದ್ಯಾರ್ಥಿಗಳು ನಿರಂತರ ಓದಿನ ಪಠ್ಯದ ಜ್ಞಾನದ ಜೊತೆಗೆ ಸಮಯ ಪ್ರಜ್ಞೆ, ಸಹಜ ಜ್ಞಾನವು ಅಗತ್ಯವಿದೆ. ವ್ಯಕ್ತಿತ್ವ ವಿಕಸನಕ್ಕೆ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಮುಂದೆ ಬದುಕಿಗೆ ಅದುವೆ ಭದ್ರ ಬುನಾದಿಯಾಗಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಅಭಿಪ್ರಾಯಪಟ್ಟರು.

ನಗರದ ಯಾದಗಿರಿ ರಸ್ತೆ ಮಾರ್ಗದಲ್ಲಿರುವ ಎಸ್‍ಎಂಸಿ ಜೈನ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರೆರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಲ ತಾಂತ್ರಿಕವಾಗಿ ಬಹು ವಿಜೃಂಭಿತವಾಗಿದೆ. ಡಿಜಿಟಲ್ ಯುಗದಲ್ಲಿದ್ದೀವಿ ಎನ್ನುವಷ್ಟರಲ್ಲಿ ಹೊಸದಾಗಿ ಅದಕ್ಕಿಂತ ಮುಂಚೂಣಿಯಾಗಿರುವ ಎಐ ಅಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಯುಗ ಆವರಿಸಿಕೊಂಡಿದೆ. ಇಂತಹ ವೇಗದ ಬದುಕಿನಲ್ಲಿ ಹಲವಾರು ಎಡುತೊಡರುಗಳು ಬರುವದು ಸಹಜ. ನಾವೆಷ್ಟು ವಿಜ್ಞಾನದಿಂದ ಮುಂದೆ ಹೊರೆಯುತ್ತಿವೋ ಅಷ್ಟೆ ಅದರಿಂದ ಸಮಸ್ಯೆಗಳು ಸೃಷ್ಠಿಯಾಗುವವು ಎಂಬುದನ್ನು ನಾವೆಲ್ಲ ಮನಗಾಣಬೇಕಿದೆ.

ಮೊಬೈಲ್, ದೂರದರ್ಶನದಿಂದ ಮಕ್ಕಳು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಸದ್ಭಳಿಕೆಗೆ ಎಷ್ಟು ಉಪಯುಕ್ತವಿದೆಯೋ ಅಷ್ಟೆ ಅದರಿಂದ ದುಷ್ಟಪರಿಣಾಮಗಳು ಇವೆ. ಹೀಗಾಗಿ ಒಳಿತ್ಯಾವದು ಕೆಡಕ್ಯಾವದು ಎಂಬುದನ್ನು ಅರಿತು ಯಾವುದೇ ವಸ್ತು ಇರಲಿ ಅದರ ಸದ್ಭಳಿಕೆ ಮಾಡಿಕೊಳ್ಳಬೇಕು.

ಸಮಯೋಚಿತ ಜ್ಞಾನವೃದ್ಧಿಸಿಕೊಂಡಾಗ ಬದುಕು ಸುಂದರವಾಗಲಿದೆ. ಪ್ರಸ್ತುತ ಕಾಲಿದಲ್ಲಿ ಸುಸಜ್ಜತ ಶಾಲಾ ಕಟ್ಟಡ, ನುರಿತ ಶಿಕ್ಷಕರು, ಉತ್ತಮ ಶೈಕ್ಷಣಿಕ ವಾತಾವರಣ ಸಕಲ ಸೌಲಭ್ಯಗಳು ತಮಗೆಲ್ಲ ದೊರೆತಿದ್ದು, ಇವೆಲ್ಲವುಗಳನ್ನು ಸದ್ಭಳಿಕೆ ಮಾಡಿಕೊಂಡು ಮುಂದಿನ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.

ಮುಂದಿನ ನಿಮ್ಮ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಪ್ರಾಂಶುಪಾಲ ಶಿವಕುಮಾರ ಟಿ, ಮಾತನಾಡಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಜೈನ್ ಅಧ್ಯಕ್ಷತೆವಹಿಸಿದ್ದರು.

ಇದೇ ಸಂರ್ದಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾವೂ ಕಲಿತ ಶಾಲೆ ಮತ್ತು ಅಕ್ಷರ, ಜ್ಞಾನಾರ್ಜನೆ ನೀಡಿ ಶಿಕ್ಷಕರ ಬಗ್ಗೆ ಮೆಚ್ಚುಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button