ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ಪೆಟ್ರೋಲ್, ಡಿಸೇಲ್-ಕರ ಏರಿಕೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ
ಯಾದಗಿರಿ, ಶಹಾಪುರ: ಪೆಟ್ರೋಲ್, ಡಿಸೇಲ್ ದರ ಕಡಿಮೆಯಾದರೂ ಇಲ್ಲಿನ ರಾಜ್ಯ ಸರ್ಕಾರ ಹೆಚ್ಚಿಸಿರುವ ಸುಂಕದಿಂದ ಜನತೆಗೆ ಹೊರೆ ಬೀಳುತ್ತಿದೆ ಎಂದು ಆರೋಪಿಸಿ ಇಲ್ಲಿನ ಯುವ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ಪಟ್ರೋಲ್, ಡಿಸೇಲ್ ಬೆಲೆ ಗಣನೀಯವಾಗಿ ಇಳಿಕೆ ಮಾಡಿದರೂ ರಾಜ್ಯದಲ್ಲಿ ಮಾತ್ರ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗುತ್ತಿಲ್ಲ. ಕಾರಣ ಇಲ್ಲಿನ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಹೆಚ್ಚಿಸಿರುವದೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ತೈಲ ಬೆಳೆ ಇಳಿಕೆಗೆ ತೈಲ ಕಂಫನಿ ಜೊತೆ ಮಾತುಕತೆ ನಡೆಸುವ ಮೂಲಕ ಕಡಿಮೆ ಬೆಲೆ ಇಳಿಸಿದರೆ, ಇಲ್ಲಿನ ರಾಜ್ಯದ ಕಾಂಗ್ರೇಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಸುಂಕ ಹೆಚ್ಚಿಸುವ ಮೂಲಕ ಇಳಿದ ಬೆಲೆಗೆ ಹೆಚ್ಚಿನ ಸುಂಕ ಪಡೆಯುತ್ತಿರುವದು ರಾಜ್ಯ ಜನರ ಬೊಕ್ಕಸಕ್ಕೆ ಕೈಹಾಕಿದೆ ಇದು ಸಮ್ಮಿಶ್ರ ಸರ್ಕಾರದ ಅನೀತಿಗೆ ಸಾಕ್ಷಿಯಾಗಿದೆ ಎಂದು ಯುವ ಮುಖಂಡ ಗುರು ಕಾಮಾ ಖಂಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಕೆಲಹೊತ್ತು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸಂಗಮೇಶ ಜಿಡಗಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ಡಾ.ಭೀಮಣ್ಣ ಮೇಟಿ, ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದರು. ಲಾಲಅಹ್ಮದ್ ಖುರೇಶಿ, ಶ್ರೀಕಾಂತ ಸುಬೇದಾರ, ರಮೇಶ ಪವಾರ, ಮಹೇಶ ಪಾಟೀಲ, ಮಂಜು ಗಣಾಚಾರಿ, ಕಾರ್ತಿಕ ಮಾಗನೂರು, ಶರಣಗೌಡ ಐಕೂರು, ಕರಣು ಶಿರವಾಳ, ಶ್ರೀನಿವಾಸ ನಾಯಕ, ಅಶೋಕ.ಡಿ, ರಾಘವೇಂದ್ರ ಯಕ್ಷಿಂತಿ, ಉಮೇಶ ಮಹಾಮನಿ, ಶಕೀಲ ಮುಲ್ಲಾ, ದೇವು ಹಯ್ಯಾಳಕರ್, ರಾಜು ಬಾಣತಿಹಾಳ, ರಾಜು, ಭೀಮರಾಯ ಸೇರಿದಂತೆ ಇತರರಿದ್ದರು.