ಚಿನ್ನ ಪಾಲಿಶ್ ನೆಪಃ 30 ಗ್ರಾಂ ಚಿನ್ನ ಕದ್ದ ಖದೀಮರು
ಚಿನ್ನ ಪಾಲಿಶ್ ಮಾಡಿ ಕೊಡುವ ನೆಪ, 30 ಗ್ರಾಮ ಸರ ಪಡೆದು ಎಸ್ಕೇಪ್ ಆದ ಖದೀಮರು
ಬೆಂಗಳೂರಃ ಕೇವಲ 10 ನಿಮಿಷದಲ್ಲಿ ಚಿನ್ನ ಫಳಫಳ ಹೊಳೆಯುವಂತೆ ಮಾಡಿ ಕೊಡುತ್ತೇವೆ ಎಂದು ಬಂದ ಕಳ್ಳರು ಮಹಿಳೆಯೊಬ್ಬಳ ಕತ್ತಿನಲ್ಲಿದ್ದ 30 ಗ್ರಾಂ ಬಂಗಾರದ ಸರವನ್ನು ಪಡೆದು ತಮ್ಮ ಕೈಚಳಕದಿಂದ ಪರಾರಿಯಾದ ಘಟನೆ ಇಲ್ಲಿನ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಗೃಹಿಣಿ ಉಷಾ ಎಂಬುವ ಮನೆಗೆ ಬಂದಿದ್ದ ಖದೀಮರು 10 ನಿಮಿಷದಲ್ಲಿ ಚಿನ್ನವನ್ನು ಫಳ ಫಳ ಹೊಳೆಯುವಂತೆ ಮಾಡಿಕೊಡುತ್ತೇವೆ. ಹೊಸ ಚಿನ್ನದಂತೆ ಮಾಡುತ್ತೇವೆ ಎಂದು ಉಷಾ ಎಂಬಾಕೆಯನ್ನು ಫುಸಲಾಯಿಸಿ ಹರಿಶಿಣ ನೀರು ತನ್ನಿ ಎಂದು ಆಕೆಯ ಕತ್ತಿನಲ್ಲಿದ್ದ ಬಂಗಾರವನ್ನು ಪಡೆದು ಹರಿಶಿಣ ನೀರಿನಲ್ಲಿ ಹಾಕಿದಂತೆ ಮಾಡಿ ತಮ್ಮ ಕೈಚಳಕ ತೋರಿಸಿ 10 ನಿಮಿಷದ ನಂತರ ಚಿನ್ಮ ತೆಗೆದುನೋಡಿ ಹೇಗೆ ಹೊಳೆಯುತ್ತೆ ಎಂದು ಯಾಮಾರಿಸಿ 30 ಗ್ರಾಮಿನ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಉಷಾ ಎಂಬ ಗೃಹಿಣಿಯೇ ಕಳ್ಳರ ಕಳ್ಳಾಟಕ್ಕೆ ಚಿನ್ನ ಕಳೆದುಕೊಂಡಿದ್ದು, ಇದೀಗ ಸಮೀಪದ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇಂಥ ಕಳ್ಳರ ತಂಡ ನಿಮ್ಮೂರಿಗೂ ಬಂದಿರಬಹುದು ಎಚ್ಚರವಹಿಸಿ ಮಹಿಳೆಯರಿಗೆ ಮಾಹಿತಿ ನೀಡಿ ಜಾಗೃತರನ್ನಾಗಿಸಿ.