BIG BOSSಃ ಗುಪ್ತಾಂಗಕ್ಕೆ ಕೈ ಹಾಕಿದ ಸ್ಪರ್ಧಿಗಳು ಭುಸುಗುಟ್ಟಿದ ನಾಗಿಣಿ
BIG BOSSಃ ಗುಪ್ತಾಂಗಕ್ಕೆ ಕೈ ಹಾಕಿದ ಸ್ಪರ್ಧಿಗಳು ಎಡೆಎತ್ತಿದ ನಾಗಿಣಿ
ಬಿಗ್ ಬಾಸ್ ಮನೆಯಲ್ಲಿ ದಿನ ಒಂದು ಕಿರಿಕ್ ವಿಚಾರಗಳು ಆರೋಪಗಳು ಹೊರಬರುತ್ತಿವೆ.
ಕಿತ್ತಳೆ ಹಣ್ಣು ಟಾಸ್ಕ್ ವಿಚಾರದಲ್ಲಿ ಮನೆಯಲ್ಲಿನ ಸಿಡಿಲು ಮತ್ತು ಸಪ್ತಾಶ್ವ ತಂಡಗಳ ನಡುವೆ ನೇರ ಹಣಾಹಣಿ ಜರುಗಿತು.
ಕಿತ್ತಳೆ ಹಣ್ಣು ಟಾಸ್ಕ್ ನಲ್ಲಿ ಹೆಣ್ಣುಮಕ್ಕಳ ಗುಪ್ತಾಂಗಗಳಿಗೆ ಗಂಡಸರು ಕೈಹಾಕಿರುವ ವಿಚಾರಕ್ಕೆ ನಡೆದ ವಾಗ್ವಾದ್ ತಾರಕಕ್ಕೆ ಏರಿದೆ.
ಟಾಸ್ಕ್ ನಲ್ಲಿ ಗುಪ್ತಾಂಗ ಎಲ್ಲಾ ಮುಟ್ಟಂಗಿಲ್ಲ ಎಂದು ನಾಗಿಣಿ ಗರಂ ಆದರೆ, ಆರ್ ಜೆ ಪೃಥ್ವಿ ಇದು ಸ್ಪರ್ಧೆ ಇಲ್ಲಿ ಗಂಡು-ಹೆಣ್ಣು ತಾರತಮ್ಯ ವಿಲ್ಲ ನಮಗೆ ಕಿತ್ತಳೆ ಹಣ್ಣು ಬೇಕು ಹೀಗಾಗಿ ಟಿಶರ್ಟ್ ಒಳಗೂ ಕೈ ಹಾಕ್ತೇವೆ ಎಂದಾಗ, ನಾಗಿಣಿ ದೀಪಿಕಾ ಭುಸುಗುಟ್ಟಿದ್ದಾಳೆ.
ಇದಕ್ಕು ಮೊದಲು ತಮ್ಮದೆ ಟೀಮಿನ ಚಂದನ್ ಆಚಾರ್ ಹೆಣ್ಣುಮಕ್ಕಳ ಮುಂದೆ ಗಂಡಸ್ತನ ತೋರುವದೇನು ದೊಡ್ಡದಲ್ಲ, ಆದರೆ ನಾವು ಹಾಗೇ ಮಾಡುವದಿಲ್ಲ ಎಂದಾಗ, ಸಪ್ತಾಶ್ವ ತಂಡದ ನಾಯಕಿ ದೀಪಿಕಾನೇ ಆಚಾರ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.
ಬಿಗ್ ಬಾಸ್ ಸ್ಪರ್ಧಿಗಳು ಮನೋರಂಜನೆ ಏನೋ ನೀಡುತ್ತಿದ್ದಾರೆ. ಆದರೆ ಇಂತಹ ವಿಚಾರಗಳು ಚರ್ಚೆ ನಡೆಯುತ್ತಿರುವದು ನೋಡುಗರಲ್ಲಿ ಮುಜುಗರ ಮೂಡಿದೆ.
ಸ್ಪರ್ಧಾಳುಗಳಿಗೆ ಗೊತ್ತಿರಲಿ ತಾವೇನು ಫಿಲ್ಮ್ ಶೂಟಿಂಗ್ ನಲ್ಲಿ ಭಾಗವಿಸುತ್ತಿಲ್ಲ, ಇದು ರಿಯಾಲಿಟಿ ಶೋ ತಮ್ಮ ವ್ಯಕ್ತಿತ್ವ ಏನು ಎಂಬುದು ಹೊರಗಡೆ ವೀಕ್ಷಕರ ಅರಿವಿಗೆ ಬರಲಿದೆ ಎಂಬ ಅರಿವು ಬಿಗ್ ಬಾಸ್ ಸ್ಪರ್ಧಿಗಳಿಗಿರಲಿ.
ತಮ್ಮ ಕಲಾ ಪ್ರದರ್ಶನ ಮಾಡಲಿ. ಸ್ಪರ್ಧಿಗಳು ತಮ್ಮದೇನು ಎಂತಹ ವ್ಯಕ್ತಿತ್ವ ಎಂಬುದು ಇಡಿ ಕರ್ನಾಟಕ ಜನಕ್ಕೆ ಗೊತ್ತಾಗುತ್ತದೆ. ಹೀಗಾಗಿ ಮೈಮೇಲೆ ಎಚ್ಚರವಾಗಿರಲಿ, ಮಾತಿನಲ್ಲಿ ಹಿಡಿತವಿರಬೇಕು ಎಂಬುದು ನಾಗರಿಕರ ಉಪದೇಶ.
ಆದರೆ ಸ್ಪರ್ಧಾಳುಗಳು ಹೊರಗಡೆ ಬಂದ ಮೇಲೇನೆ ಇದೆಲ್ಲ ಅರ್ಥವಾಗೋದು. ಅಲ್ಲಿವರೆಗೂ ವೀಕ್ಷಕರು ಗೊಣಗುವದು, ನಗುವದು ಮಜಾ ತಗೊಳ್ಳೋದು ಅಷ್ಟೆ.