ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಅನುಭಾವವೆಂಬುದು ಆತ್ಮವಿದ್ಯೆ…
ಅನುಭಾವವ ನುಡಿವ ಅಣ್ಣಗಳಿರಾ,
ಅನುಭಾವವೆತ್ತ ನೀವೆತ್ತ ಹೋಗಿರಣ್ಣ.
ಅನುಭಾವವೆಂಬುದು ಆತ್ಮವಿಧ್ಯೆ.
ಅನುಭಾವವೆಂಬುದು ತಾನಾರೆಂಬುದ ತೋರುವುದು.
ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು.
ಇಂತಪ್ಪ ಅನುಭಾವದನುವನರಿಯದೆ ಶಾಸ್ತ್ರಜಾಲದ ಪಸರವನಿಕ್ಕಿ
ಕೊಳ್ಳದೆ ಕೊಡದೆ ವ್ಯವಹಾರವ ಮಾಡುವ ಅಣ್ಣಗಳಿರಾ,ನೀವೆತ್ತ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅನುಭಾವವೆತ್ತ?
-ಸ್ವತಂತ್ರ ಸಿದ್ಧಲಿಂಗ