ಪ್ರಮುಖ ಸುದ್ದಿ

ಸಗರ ಗ್ರಾಮದಲ್ಲಿ ಭರ್ಜರಿ‌ ಸಂತೆ ವ್ಯಾಪಾರಃ ಆಕ್ರೋಶಗೊಂಡ ಪೊಲೀಸರು

ಸಗರ ಗ್ರಾಮದಲ್ಲಿ ಭರ್ಜರಿ‌ ಸಂತೆ ವ್ಯಾಪಾರಃ ಬುದ್ಧಿಗೇಡಿ ಜನ ಆಕ್ರೋಶಗೊಂಡ ಪೊಲೀಸರು

ಶಹಾಪುರಃ ತಾಲೂಕಿನ ಸಗರ ಗ್ರಾಮದಲ್ಲಿ ನಿನ್ನೆ ಇದ್ದ ವಾರದ ಸಂತೆ ಕೊರೊನಾ ಹಾವಳಿಯಿಂದಾಗಿ ಪೊಲೀಸರು ಬಂದ್ ಮಾಡಿಸಿದ್ದರು.

ಆದರೆ ಸೋಮವಾರ ಪುನಃ ವಾರದ ಸಂತೆ ಬೆಳ್ಳಂಬೆಳಗ್ಗೆಯೇ ಆರಂಭಿಸಿದ ಘಟನೆ ನಡೆದಿದೆ. ಕಾಯಿಪಲ್ಯೆ ಮಾರಾಟಗಾರರು, ಧಾನ್ಯ ಮಾರಾಟಗಾರರು ವ್ಯಾಪಾರ ಆರಂಭಿಸಿದ್ದು, ಸಂತೆಯಲ್ಲಿ ಜನ ಜಂಗುಳಿ ಸೇರಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರಿಗೆ ಬಿಸಿ ಮುಟ್ಟಿ ಖಾಲಿ ಮಾಡಿಸುತ್ತಿರುವದು ತಿಳಿದು ಬಂದಿದೆ.

ಜನರ ವರ್ತನೆಗೆ ಆಕ್ರೋಶ ವ್ತಕ್ತಪಡಿಸಿದ ಪೊಲೀಸರು, ನಾವೆಲ್ಲ ನಿಮ್ಮ ಜೀವ ಉಳಿವಿಗಾಗಿ‌ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ, ನೀವೇ ಕುಳಿತು ನಿಯಮ ಮುರಿದು ಒಂದೆಡೆ ಸೇರ್ತೀರಿ ಸಂತೆ ನಡೆಸುತ್ತೀರಿ ಎಂದರೆ‌ ಏನ್ ಹೇಳಬೇಕು.

ಕೊರೊನಾ‌ ಮಹಾಮಾರಿ ಅಟ್ಟಹಾಸ‌ ಮೆರೆಯುತಿದೆ. ಈ ಹಿಂದೆ ಇಲಿ ಜ್ವರ ಬಂದಾಗ್ ಹೆಂಗ್ ಸ್ಥಿತಿಯಾಗಿತ್ತು. ಅದಕ್ಕಿಂತ ಘೋರ ಸ್ಥಿತಿ ಇದೆ ಅರಿತು‌ ನಡೆಯಿರಿ ಮೊದಲು. ನಿಮ್ಮ ಜೀವ ರಕ್ಷಣೆಗೆ ನಾವು ಬಡಿದಾಡಿದರೆ, ನೀವೆ ಹೊರಗಡೆ ಬಂದ್ರೆ ನಾವೇನ್ ಮಾಡೋದು. ಜರ ವಿಚಾರ ಮಾಡ್ರಿ. ಕೊರೊನಾ ದಿಂದ ಬಚಾವ್ ಆಗಬೇಕೇ ಮನೆ ಬಿಟ್ಟು ಹೊರಗಡೆ ಬರಬೇಡಿ.

ಗಂಜಿಯನ್ನಾದರೂ ಕುಡಿದು ಮನೆಯಲ್ಲಿರಿ ಎಂದು ಪೊಲೀಸರು ಗದರಿಸಿ ಬೆದರಿಸಿ ಲಾಠಿ ಹಿಡಿದು ಅಪ್ಪಯ್ಯ ದಮ್ಮಯ್ಯ ಎಂದು ಸಂತೆಯನ್ನು ಖಾಲಿ ಮಾಡಿಸುತ್ತಿದ್ದಾರೆ. ಇದನ್ನೋಡಿದರೆ ಬುದ್ಧಿಗೇಡಿ‌ ಜನಕ್ಕೆ ಏನ್ ಹೇಳಬೇಕು.

ಪೊಲೀಸರು, ವೈದ್ಯರ ಶ್ರಮ ವ್ಯರ್ಥವಾಗದಿರಲಿ. ಜನ ಇನ್ನಾದರೂ ತಿಳಿದು ಮನೆಯಲ್ಲಿ ಬಾಯಿ‌ ಮುಚ್ಕೊಂಡು ಕುಳಿತರೆ ಸಾಕು ಎನ್ನುವಂತಾಗಿದೆ

Related Articles

Leave a Reply

Your email address will not be published. Required fields are marked *

Back to top button