ಪ್ರಮುಖ ಸುದ್ದಿ
ಚರಬಸವೇಶ್ವರ ದೇವಸ್ಥಾನದಲ್ಲೂ ಝಗಮಘಿಸಿದ ದೀಪಗಳು
ಚರಬಸವೇಶ್ವರ ದೇವಸ್ಥಾನದಲ್ಲೂ ಝಗಮಘಿಸಿದ ದೀಪಗಳು
ಶಹಾಪುರಃ ಕೊರೊನಾ ನಾಶಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಚಿಂತನೆಯಲ್ಲಿರುವ ದೇಶದ ಪ್ರಧಾನಿ ಅವರು ನೀಡಿದ ಕರೆಗೆ ರವಿವಾರ ರಾತ್ರಿ 9 ಗಂಟೆಗೆ ಇಲ್ಲಿನ ಪ್ರಸಿದ್ಧ, ಸಗರನಾಡು ಜನತೆಯ ಆರಾಧ್ಯ ದೈವ ಶ್ರೀಚರಬಸವೇಶ್ವರ ದೇವಸ್ಥಾನದಲ್ಲೂ ದೀಪ ಬೆಳಗಿಸಲಾಯಿತು.
ಶ್ರೀ ಸಂಸ್ಥಾನದ ಶರಣು ಬಿ. ಗದ್ದುಗೆ ಉಪಸ್ಥಿತಿಯಲ್ಲಿ ಭಕ್ತರು ದೀಪ ಬೆಳಗಿಸಿ ಧ್ಯಾನಿಸುವ ಮೂಲಕ ಮಹಾಮಾರಿ ಕೊರೊನಾ ನಾಶಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಪ್ರಕಾಶ ಗದ್ದುಗೆ, ಶಂಭು ಗೋಗಿ ಇತರರಿದ್ದರು.