ಪ್ರಮುಖ ಸುದ್ದಿ

ಕರಪತ್ರ ಅಂಟಿಸುವಾಗ ಕಿರಿಕ್ ಯುವಕನ ಮೇಲೆ ಹಲ್ಲೆ, ಶಹಾಪುರ ಠಾಣಾ ವ್ಯಾಪ್ತಿ ಘಟನೆ

ಶಹಾಪುರಃ ಅಂಗಡಿಯೊಂದರ ಗೋಡೆಗೆ ಕರಪತ್ರ ಅಂಟಿಸುವ ವಿಷಯಕ್ಕೆ ಗಲಾಟೆ ಆರಂಭವಾಗಿ, ಕರಪತ್ರ ಅಂಟಿಸುತ್ತಿದ್ದ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಗರದ ಮಾರುತಿ ಮಂದಿರ ಹತ್ತಿರ ಮಂಗಳವಾರ ರಾತ್ರಿ ನಡೆದಿದೆ.

ಚಂದ್ರಶೇಖರ ತಂದೆ ಶರಣಪ್ಪ ಪೂಜಾರಿ (32) ಎಂಬಾತನೇ ಹಲ್ಲೆಗೊಳಗಾಗಿದ್ದು, ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜೇವರ್ಗಿ ತಾಲೂಕಿನ ಆಂದೋಲಾದ ಕರುಣೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಂದೋಲಾ ಗ್ರಾಮ ನಿವಾಸಿಯಾದ ಚಂದ್ರಶೇಖರ ಪೂಜಾರಿ ಕರಪತ್ರಗಳನ್ನು ಅಂಟಿಸಲು ನಗರಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರುವದಿಲ್ಲ.

Related Articles

Leave a Reply

Your email address will not be published. Required fields are marked *

Back to top button