ವಿನಯ ವಿಶೇಷ

ಬಜೆಟ್‍ನಲ್ಲಿ ಮಹದಾಯಿಗಿಲ್ಲ ಮುಲಾಮು -ಯಡಿಯೂರಪ್ಪ

ಸಮ್ಮಿಶ್ರ ಸರ್ಕಾರದಿಂದ ಸೇಡಿನ ರಾಜಕಾರಣ ಯಡಿಯೂರಪ್ಪ ಆರೋಪ

ಯಾದಗಿರಿ, ಶಹಾಪುರಃ ರಾಜ್ಯ ಸರ್ಕಾರ ಅಭಿವೃದ್ಧಿ ಎಂಬುದನ್ನು ಮರೆತಿದ್ದು, ಬರಿ ದ್ವೇಷದ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರ ಸಮೀಪದ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

104 ಜನ ಇರುವ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕೆಲಸಕ್ಕಾಗಿ ಕೇವಲ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ 5-7 ಕೋಟಿ ಅನುದಾನ ಬಿಡುಗಡೆ ಮಾಡುವದು ನೋಡಿದರೆ ಗೊತ್ತಾಗುತ್ತದೆ ಇದು ಸೇಡಿನ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಸುಮಾರು 20 ಜನ ಶಾಸಕರು ರೆಸಾರ್ಟ್‍ನಲ್ಲಿ ಕುಳಿತು ಸಿಎಂ ವಿರುದ್ಧ ಮಾತನಾಡಿದರು. ಅಲ್ಲದೆ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಹೇಳಿಕೆಗಳನ್ನು ನೀಡುವದು ನೋಡಿದರೆ ಸಮ್ಮಿಶ್ರ ಸರ್ಕಾರದ ಆಡಳಿತದ ಸ್ಥಿತಿ ಏನೆಂಬುದು ತಿಳಿಯುತ್ತದೆ.

ಮುಖ್ಯವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷವಹಿಸಿದ್ದು ಕಂಡು ಬರುತ್ತಿದೆ. ಬಜೆಟ್‍ನಲ್ಲಿ ಆಲಮಟ್ಟಿ ಮತ್ತು ಮಹಾದಾಯಿ ಕುರಿತು ಒಂದು ಶಬ್ಧ ಎತ್ತಲಿಲ್ಲ. ಹೀಗಾಗಿ ಉಕ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣೆಸಿದೆ. ಮಹಾದಾಯಿ ಕುರಿತು ಬಜೆಟ್‍ನಲ್ಲಿ ಯಾವುದೇ ಅನುದಾನ ಬಿಡುಗಡೆಗೊಳಿಸದಿರುವದು ಉಕ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬರಗಾಲ ಕುರಿತು ಕಾಳಜಿಲ್ಲದ ಸರ್ಕಾರ ರೈತರ ಹಿತಾಸಕ್ತಿ ಮರೆತ ಸರ್ಕಾರ ಇದಾಗಿದೆ. ಇಲ್ಲಿವರೆಗೂ 1000 ಕೋಟಿ ಸಹ ತಮ್ಮ ಬೊಕ್ಕಸದಿಂದ ಬಿಡುಗಡೆ ಮಾಡಿಲ್ಲ. ಸುಮಾರು ರಾಜ್ಯದ 170 ತಾಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ಯಾವುದೇ ಕಾರ್ಯ ಕೆಲಸಗಳು ನಿರೀಕ್ಷೆಯಂತೆ ನಡೆಯಲಿಲ್ಲ ಎಂಬ ಆಕ್ರೋಶ ಜನರಲ್ಲಿದೆ.

ಬ್ರೀಜೇಶ್ ಮಿಶ್ರಾ ವರದಿ ಪ್ರಕಾರ ಕೃಷ್ಣಾ ನದಿ ನೀರನ್ನು ಸದುಪಯೋಗ ಪಡೆಸಿಕೊಳ್ಳಲಿಲ್ಲ. ಉಕ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರವಿಕುಮಾರ, ಜೇವರ್ಗಿ ಮಾಜಿ ಶಾಸಕ ನರಿಬೋಳ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಉಪಸ್ಥಿತರಿದ್ದರು.


ನನ್ನ ಮನೆ ಬಿಜೆಪಿ ಮನೆ

ಬಿಜೆಪಿ ದೇಶದಾದ್ಯಂತ ಕರೆ ನೀಡಿರುವ ನನ್ನ ಮನೆ ಬಿಜೆಪಿ ಕಾರ್ಯಕ್ರಮವನ್ನು ಇದೇ 24 ರಂದು ಎಲ್ಲಾ ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಹಿತೈಷಿಗಳು ತಮ್ಮ ತಮ್ಮ ಮನೆ ಮೇಲೆ ಬಿಜೆಪಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದರು.

27 ರಂದು ಮನೆ ಮನೆ ಮುಂದೆ ರಂಗೋಲಿ ಬಿಡಿಸಿ ದೀಪ ಬೆಳಗಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಲಿದೆ. ದೇಶದಾದ್ಯಂತ ದೀಪ ಬೆಳಗಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಹೊಸ ದಾಖಲೆ ಸೃಷ್ಠಿಸಲಿದೆ ಎಂದ ಅವರು,

ಮಾರ್ಚ್ 18 ರಂದು ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬೈಕ್ ರ್ಯಾಲಿ ನಡೆಸಲಿದೆ. ಇದೊಂದು ಅದ್ಭುತ ರ್ಯಾಲಿ ಆಗಲಿದೆ. ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲಡೆ ಉತ್ತಮ ಪ್ರತಿಕ್ರೀಯೆ ದೊರೆತಿದ್ದು, ಮಾರ್ಚ್ 7 ರಂದು ಕಲಬುರ್ಗಿಯಲ್ಲಿ ಯಾತ್ರೆ ನಡೆಯಲಿದ್ದು, ಪ್ರಧಾನಿ ಮೋದಿಜೀ ಅವರು ಅಂದು 11 ಗಂಟೆಗೆ ಕಲಬುರ್ಗಿ ನಗರಕ್ಕೆ ಆಗಮಿಸಲಿದ್ದಾರೆ. ಕನಿಷ್ಠ ಎರಡುವರೆ ಲಕ್ಷ ಜನ ಸೇರುವ ನಿರೀಕ್ಷೆ ಹೊಂದಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button