ಪ್ರಮುಖ ಸುದ್ದಿ

ಬಿಜೆಪಿ ಮತ್ತು ದೋಸ್ತಿ ಪಕ್ಷದ ನಾಯಕರ ನಡುವೆ “ಗೌರವ” ಗಲಾಟೆ

ಬೆಂಗಳೂರು : ಕಲಾಪವನ್ನು ಮುಂದೂಡಿ ವಿಶ್ವಾಸ ಮತ ಸಾಬೀತು ಪಡಿಸಲು ಮತ್ತಷ್ಟು ಕಾಲಾವಕಾಶ ಕೋರಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಬಳಿ ಮನವಿ ಮಾಡಿದರು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಸೋಮವಾರ ಬಹುಮತ ಸಾಬೀತು ಪಡಿಸುವುದಾಗಿ ಶುಕ್ರವಾರ ಸಂಜೆ ವೇಳೆ ನೀವೆ ಹೇಳಿದ್ದರೆ. ನುಡಿದಂತೆ ನಡೆದು ಸದನದ ಗೌರವ ಉಳಿಸಿ ಎಂದರು.

ಗೌರವ ಎಂದರೇನು, ಕಳೆದ ಹದಿನೈದು ದಿನಗಳಿಂದ ನಿವೇನು ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ಗೊತ್ತಿದೆ. ನಿಮ್ಮಿಂದ ಗೌರವದ ಪಾಠ ಕಲಿಯಬೇಕಿಲ್ಲ. ಸಚಿವ ಕೃಷ್ಣ ಭೈರೇಗೌಡರು ನಿಮ್ಮ ಪಕ್ಷದ ಬಗ್ಗೆ ಎಳೆಎಳೆಯಾಗಿ ಮದ್ಯಾನವೇ ಬಿಚ್ಚಿಟ್ಟಿದ್ದಾರಲ್ಲ ಎಂದರು. ಕಾಂಗ್ರೆಸ್-ಜೆಡಿಎಸ್ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

Related Articles

Leave a Reply

Your email address will not be published. Required fields are marked *

Back to top button