ಪ್ರಮುಖ ಸುದ್ದಿ

ಬೋನಿಗೆ ಬಿದ್ದಿತು ಹೆಣ್ಣು ಚಿರತೆ!

ಹಾಸನ : ಚನ್ನರಾಯಪಟ್ಟಣ ‌ತಾಲ್ಲೂಕಿನ ಶ್ರವಣಬೆಳಗೊಳದ ಶ್ರೀಕಂಠ ನಗರದ ಬಳಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಎರಡು ವರ್ಷದ ಹೆಣ್ಣು ಚಿರತೆ ಕಳೆದ ಒಂದು ವಾರದಿಂದ ಆಗಾಗ ನಗರ ಬಳಿ‌ಕಾಣಿಕೊಂಡಿತ್ತು. ಹೀಗಾಗಿ, ಅಧಿಕಾರಿಗಳು ಚಿರತೆಯ‌‌ ಸೆರೆ ಹಿಡಿಯಲು ಬೋನ್ ಇರಿಸಿದ್ದರು. ಆಹಾರ ಹುಡುಕುತ್ತ ಬಂದ ‌ಚಿರತೆ ಬೋನಿಗೆ ಬಿದ್ದಿದೆ.

ಚಿರತೆ ಸೆರೆ ಸಿಕ್ಕಿದ್ದು ನಗರದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಚಿರತೆ ಆರೋಗ್ಯ ತಪಾಸಣೆ ನಡೆಸಿ‌ ಮರಳಿ ಕಾಡಿಗೆ ಬಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button