ಯಾದಗಿರಿಃ ಜಿಲ್ಲಾದ್ಯಂತ ಬಾರಿ ಮಳೆ ಜನ ಜೀವನ ಅಸ್ತವ್ಯಸ್ತ
ಯಾದಗಿರಿ, ಶಹಾಪುರ, ಸುರಪುರದಲ್ಲಿ ಮಳೆ : ಒಂದೆಡೆ ಖುಷಿ ಮತ್ತೊಂದೆಡೆ ಸಾವು, ನೋವು!
ಯಾದಗಿರಿಃ ಜಿಲ್ಲೆಯಲ್ಲಿ ಮಂಗಳವಾರ ಧಾರಕಾರ ಮಳೆ ಸುರಿದ ಪರಿಣಾಮ ಬಿಸಿಲ ನಗರಿ ತಂಪಾಗಿದೆ.
ಆದರೆ ಜೆಲ್ಲೆ ಹಲವಡೆ ಸಾವು ನೋವು ಸಂಭವಿಸಿದ ಘಟನೆಗಳು ಜರುಗಿವೆ.
ಭಾರಿ ಪ್ರಮಾಣದಿ ಸುರಿದ ಮಳೆಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತತಗೊಂಡಿದೆ.
ಅಲ್ಲದೆ ಹಲೆವೆಡೆ ರಸ್ತೆ ತುಂಬೆಲ್ಲ ನೀರು ಆವರಿಸಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಶಾಹಪುರ ತಾಲ್ಲೂಕಿನ ಕೋನಳ್ಳಿ ಗ್ರಾಮದ ಹಳ್ಳ ತುಂಬಿದ್ದು, ರಸ್ತೆ ತುಂಬೆಲ್ಲ ನೀರು ಆವರಿಸಿದ ಹಿನ್ನೆಲೆಯಲ್ಲಿ ವಿಕಲಚೇತನ ಬೈಕ್ ಸವಾರ ಲಿಂಗಪ್ಪ ೩೦ ಎಂಬ ಅಂಗವಿಕಲ ರಸ್ತೆ ಮದ್ಯೆ ಸಿಲುಕಿದಾಗ ನೀರಿನ ಹರಿಹು ಹೆಚ್ಚಾಗಿ ಅತ್ತ ದಡಮುಟ್ಟದೆ ಹಿಂದಕ್ಕೂ ಬರದೆ ಸಂಕಷ್ಟಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿದ ಘಟನೆ ನಡೆದಿದೆ.
ನಂತರ ಸಾರ್ವಜನಿಕರು, ಸ್ಥಳೀಯರು ಆತನ ನೆರವಿಗೆ ಧಾವಿಸಿದ್ದು, ಪ್ರಾಣಪಯದಿಂದ ಪಾರು ಮಾಡಿದ್ದಾರೆ ಎನ್ನಲಾಗಿದೆ.
ಲಿಂಗಪ್ಪ ಪಕ್ಕದ ಬಿಳ್ವಾರ ಗ್ರಾಮ ನಿವಾಸಿಯಾಗಿದ್ದು, ಕೆಲಸದ ನಿಮಿತ್ತ ವಡಗೇರಾ ಗ್ರಾಮಕ್ಕೆ ಹೋಗಿದ್ದು, ಮರಳಿ ವಾಪಸ್ ಬರುವಾಗ ಘಟನೆ ಸಂಭವಿಸಿದರೆ.
ನಂತರ ಸ್ಥಳೀಯರ ಸಹಾಯದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಈ ರಸ್ತೆಯು ಬಿಳ್ವಾರ, ಕೋನಳ್ಳಿ,ಮಾಚನೂರು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ.
ಈ ರಸ್ತೆ ತುಂಬೆಲ್ಲ ನೀರು ಆವರಿಸಿದ ಹಿನ್ನೆಲೆಯಲ್ಲಿ ಸವಾರರು ಹರಸಾಸ ಪಡುವಂತಾಗಿದೆ.
ಇಷ್ಟೆಲ್ಲಾ ಅವಘಡಗಳು ನಡೆದರು. ಅಧಿಕಾರಿಗಳು ಯಾವುದೆ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿಲಗೆ ಓರ್ವ ವ್ಯಕ್ತಿ ಬಲಿ
ಯಾದಗಿರಿ ತಾಲೂಕಿನ ಸಣ್ಣ ಸಂಬರ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ತೆರಳಿದ್ದ ಘಟನ ನಡೆದಿದೆ. ಹತ್ತಿ ಬಿಡಿಸಲು ಹೋದಾಗ ಮಹೇಶ ಕುರುಬರ (23) ಎಂಬಾತ ಸಿಡಿಲಿಗೆ ಬಲಿಯಾದ ದುರ್ಘಟನೆಯು ಜರುಗಿದೆ.
ಸ್ಥಳಕ್ಕೆ ಸೈದಾಪುರ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.