ಪ್ರಮುಖ ಸುದ್ದಿ

ದೇಶ ಕಂಡ‌ ಅಜಾತ ಶತ್ರು ವಾಜಪೇಯಿ ಅಸ್ತಂಗತ, ದೇಶಾದ್ಯಂತ ಮಿಡಿದ ಕಂಬನಿ

ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಕಳೆದ ಐದಾರು ವರ್ಷಗಳಿಂದ ವಯೋ ಅನಾರೋಗ್ಯದಿಂದ‌ ಬಳಲುತ್ತಿದ್ದು, ಇಂದು ನಗರದ ಏಮ್ಸ್​ ಆಸ್ಪತ್ರೆಯಲ್ಲಿ ನಿಧನರಾದರು.

ದೇಶದ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯ ಶಿಕ್ಷಕರಾಗಿ‌ ಕಾರ್ಯನಿರ್ವಹಿಸುತ್ತಿದ್ದ ಅಟಲ್ ಜೀ, ಸಾಮಾಜಿಕ‌ ಜೀವನದಲ್ಲಿ‌ ಜನರ‌ ಕಷ್ಟ ನಷ್ಟಗಳನ್ನು ಅರಿತು ದೇಶದ ಸುಭದ್ರತೆಗಾಗಿ‌‌ ಅಭಿವೃದ್ಧಿಗಾಗಿ‌ ರಾಜಕೀಯ ರಂಗಕ್ಕೆ‌ ಇಳಿದು ಜನಸೇವೆಯಲ್ಲಿ‌ ನಿಷ್ಠಾವಂತ ರಾಜಕಾರಣಿಯಾಗಿ‌ ಗುರುತಿಸಿಕೊಂಡಿದ್ದ ದೇಶದ‌‌ ಮಾಜಿ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಡವಾಗಿದೆ.

ರಾಜಕೀಯ ರಂಗದಲ್ಲಿ ಅಜಾತಶತ್ರು, ಎಂದೇ ಖ್ಯಾತಿ ಪಡೆದಿದ್ದ ವಾಜಪೇಯಿ ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕಳೆದ ಜೂನ್‌ 11ರಿಂದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಇಂದು ಸಂಜೆ 5.5ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಬೆಳಗ್ಗೆಯಿಂದಲೇ ಅವರ ಸ್ಥಿತಿ‌ ಗಂಭೀರ ಸ್ವರೂಪಕ್ಕೆ‌ ತಲುಪಿತ್ತು. ಆ ಕಾರಣಕ್ಕೆ ಪ್ರಧಾನಿ ಮೋದಿಜೀ ಸೇರಿದಂತೆ‌ ರಾಷ್ಟ್ರೀಯ ಅಯಕರು ವಿವಧ‌ ಪಕ್ಷದ‌ಮುಖಂಡರು ಆಸ್ಪತ್ರೆಗೆ ಭೇಟಿ‌ ನೀಡುತ್ತಿದ್ದರು.

ನಿನ್ನೆಯಿಂದ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ರೆ, ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ವಾಜಪೇಯಿ ವಿಧಿವಶರಾಗಿದ್ದಾರೆ.

ಏಮ್ಸ್‌ ಆಸ್ಪತ್ರೆಯ ಪತ್ರಿಕಾ ಪ್ರಕಟಣೆಯಲ್ಲಿ ವಾಜಪೇಯಿ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ವಾಜಪೇಯಿ ಅವರ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

24 ಗಂಟೆಗಳಲ್ಲಿ ಪ್ರಧಾನಿ ಅವರು 2 ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು.ವಾ ಜಪೇಯಿ ಅವರ ಆಪ್ತ ಗೆಳೆಯ ಎಲ್‌.ಕೆ.ಅಡ್ವಾಣಿ ಕೂಡ ಆಸ್ಪತ್ರೆಯಲ್ಲಿಯೇ ಇದ್ದರು.

ಅಲ್ಲದೇ, ಕೇಂದ್ರ ಸಂಪುಟದ ಹಿರಿಯ ಸಚಿವರು, ಬಿಜೆಪಿ ನಾಯಕರು, ಮುಖಂಡರು ಅವರ‌ ಅಪಾರ‌ ಅಭಿಮಾನಿ ಬಳಗ‌ ಏಮ್ಸ್‌ ಆಸ್ಪತ್ರೆಯಲ್ಲಿಯೇ ಬಿಡುಬಿಟ್ಟಿದ್ದರು.

ವಾಜಪೇಯಿ‌ ನಡೆದು ಬಂದ ದಾರಿ ಸಂಕ್ಷಿಪ್ತ ಮಾಹಿತಿ

1996 ರಲ್ಲಿ 13 ದಿನಗಳ ಕಾಲ ದೇಶದ 10ನೇ ಪ್ರಧಾನ ಮಂತ್ರಿಯಾಗಿದ್ದ ವಾಜಪೇಯಿ ಅವರು ನಂತರ, 1998-2004ರಲ್ಲಿ ಮತ್ತೆ ದೇಶದ ಪ್ರಧಾನಿಯಾಗಿದ್ದರು.

ಅತ್ಯದ್ಭುತ ವಾಗ್ಮಿ, ಅತ್ಯುತ್ತಮ ಸಂಸದೀಯ ಪಟು ಎನಿಸಿದ್ದ ವಾಜಪೇಯಿ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂಸದರಾಗಿದ್ದರು.

ಬಿಜೆಪಿ ವತಿಯಿಂದ ಲೋಕಸಭೆಯನ್ನು ಬರೋಬ್ಬರಿ 10 ಬಾರಿ ಪ್ರತಿನಿಧಿಸಿದ್ದರು. ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿದ್ದರು.

ವಯೋಸಹಜವಾಗಿ 2009 ರಲ್ಲಿ ಆರೋಗ್ಯ ಏರುಪೇರಾಗುವವರೆಗೂ ಅವರು ಲಖನೌ ಸಂಸದರಾಗಿ ದೇಶದ ರಾಜಕೀಯದಲ್ಲಿ ಅತ್ಯಂತ ಸಕ್ರಿಯರಾಗಿದ್ದರು.

ವಾಜಪೇಯಿ ಅವರು ಭಾರತೀಯ ಜನ ಸಂಘದ ಸ್ಥಾಪಕ ಸದಸ್ಯರಾಗಿದ್ದರು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ‌ ವ್ಯವಹಾರಗಳ ಖಾತೆ ನಿಭಾಯಿಸಿದ್ದರು.

ಜನತಾ ಸರಕಾರ ಬಿದ್ದು ಹೋದಾಗ ವಾಜಪೇಯಿ ಅವರು ಭಾರತೀಯ ಜನ ಸಂಘವನ್ನು ಭಾರತೀಯ ಜನತಾ ಪಕ್ಷವನ್ನಾಗಿ 1980ರಲ್ಲಿ ಮರು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾಜಪ ಪಕ್ಷದ ಮೊದಲ‌ ಪ್ರಧಾನಿಯ ಹೆಗ್ಗಳಿಕೆ‌ ಅಟಲ್ಜೀ ಅವರಿಗೆ ಸಲ್ಲುತ್ತದೆ.

Related Articles

Leave a Reply

Your email address will not be published. Required fields are marked *

Back to top button