ಕಾಂಗ್ರೆಸ್ ಯುವ ಸಮಿತಿ ಅಧ್ಯಕ್ಷ ಮೌನೇಶ, ಉಪಾಧ್ಯಕ್ಷರಾಗಿ ಲಕ್ಷ್ಮಣ ನೇಮಕ
ಶಹಾಪುರಃ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ನೇಮಕ
ಯಾದಗಿರಿ, ಶಹಾಪುರ: ನಗರದ ಯುವ ಮುಖಂಡ ಮೌನೇಶ.ಎಂ.ನಾಟೇಕಾರ ಅವರನ್ನು ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಜಿಲ್ಲಾ ಯುವ ಅಧ್ಯಕ್ಷ ರಾಹುಲ್.ಎಂ.ಅರಿಕೇರಾ ಅವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ಕಾಂಗ್ರೇಸ್ ಪಕ್ಷದ ಧ್ಯೇಯೋದ್ದೇಶಗಳನ್ನು ಅರಿತು ಪಕ್ಷದ ಸಂಘಟನೆಯಲ್ಲಿ ಶ್ರಮಿಸಬೇಕು. ಯುವ ಶಕ್ತಿ ಬಲವರ್ಧನೆ ಪಕ್ಷದ ಆದೇಶದಂತೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳಬೇಕೆಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.
ಪಕ್ಷದ ಕಾರ್ಯಕ್ರಮಗಳನ್ನು ಕಾರ್ಯಕರ್ತರ ಒಮ್ಮತದ ಮೇರೆಗೆ ಎಲ್ಲರ ಸಹಕಾರದೊಂದಿಗೆ ನೆರವೇರಿಸಬೇಕು. ಪಕ್ಷ ಬಲಿಷ್ಠವಾಗಿ ಕಟ್ಟುವ ಮೂಲಕ ರಾಜ್ಯ ನಾಯಕರ ಮುಖಂಡರ ಗಮನಸೆಳೆಯಬೇಕು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ನೂತನವಾಗಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೌನೇಶ ಹಾಗೂ ಉಪಾಧ್ಯಕ್ಷ ಲಕ್ಷ್ಮಣ ನೇಮಕವಾದ ಹಿನ್ನೆಲೆ ಕಾರ್ಯಕರ್ತರು ತಮ್ಮ ನೆಚ್ಚಿನ ಶಾಸಕ ದರ್ಶನಾಪುರ ಸಮೇತ ನೂತನ ಪದಾಧಿಕಾರಿಗಳಿಗೆ ಹೂಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು.
ನೂತನ ಪದಾಧಿಕಾರಿಗಳು: ಮೌನೇಶ.ಎಂ.ನಾಟೇಕಾರ, (ಅಧ್ಯಕ್ಷ) ಲಕ್ಷ್ಮಣ ಶೆಟಿಗೇರಾ, (ಉಪಾಧ್ಯಕ್ಷ) ಚನ್ನಬಸವ (ಪ್ರಧಾನ ಕಾರ್ಯದರ್ಶಿ) ಶಾರೂಖ, ಶಿವರಾಜ, ಬಂದಗಿಸಾಬ್, ಬಸನಗೌಡ, ಕಾಶೀಪತಿ, ಚಿದಾನಂದ, ಸೈಯದ್ ಕರೀಮ, ಬಸವರಾಜ, ಈರಪ್ಪ, ರಾಮಚಂದ್ರ, ಚನ್ನಬಸವ, ರೇವಣಸಿದ್ದ, ಸಾಹೇಬಗೌಡ ಎಲ್ಲರೂ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ.
ಅಭಿನಂದನೆ: ಶಹಾಪುರ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ನೇಮಕ ಮಾಡಲು ಸಹಕಾರ ನೀಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಅಧ್ಯಕ್ಷ ಮರಿಗೌಡ ಹುಲ್ಕಲ್ ಅವರಿಗೆ ಅಧ್ಯಕ್ಷ ಮೌನೇಶ.ನಾಟೇಕಾರ ಮತ್ತು ಸಮಸ್ತ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.