ಪ್ರಮುಖ ಸುದ್ದಿ

FIRST NIGHT ದಿನವೇ ವಧು ಕಾಣೆ..!

ಕೊಪ್ಪಳಃ‌ ಮದುವೆಯಾದ ಮೊದಲ ರಾತ್ರಿಯೇ ವಧು ಕಾಣೆಯಾಗಿದ್ದು, ಹಲವಾರು ಉಹಾಪೋಹಕ್ಕೆ ಕಾರಣವಾಗುತ್ತಿದೆ, ಮನೆಯವರು ವಧುವಿನ ಆಸ್ತಿಗಾಗಿ ಕೆಲವರು ಅಪಹರಣ ನಡೆಸಿದ್ದಾರೆ ಎಂದರೆ ಇನ್ನೂ ಕೆಲವರು ಇದರ ಹಿಂದೆ ಬೇರೆಯದೇ ಕಥೆ ಇದೆ ಎಂದು ಹೇಳಲಾಗುತ್ತಿದೆ ಇಂತಹ ಅಪರೂಪದ ಘಟನೆ ಕೊಪ್ಪಳ ಜಿಲ್ಲೆಯ ಗುಡೂರ ಗ್ರಾಮದಲ್ಲಿ ನಡೆದಿದೆ.

ಅಪಹರಣಕ್ಕೊಳಗಾದ ವಧು ಕಳೆದ ತಿಂಗಳ ಸೆ. 24 ರಂದು ಮಲ್ಲನಗೌಡ ಎಂಬಾತನ ಜೊತೆ ಮದುವೆಯಾಗಿದ್ದರು.
ಅಕ್ಡೋಬರ್ 07 ರಂದು ಮೊದಲ ರಾತ್ರಿಯ ದಿನ ಶೌಚಾಲಯಕ್ಕೆ ಹೋದ  ವಧುವನ್ನು ಅಪಹರಿಸಲಾಗಿದೆ.

ಈ ಬಗ್ಗೆ ಪತಿ ಮಲ್ಲನಗೌಡ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರಟಗಿ ಗ್ರಾಮದ ಅಂಜುಕುಮಾರ್ ರೆಡ್ಡಿ ಸೇರಿದಂತೆ 6 ಜನರ ಗುಂಪೊಂದು ಅಪಹರಿಸಿರುವ ಶಂಕೆ ಬಲವಾಗಿ ಕೇಳಿ ಬರುತ್ತಿದೆ.

ಆದರೆ ಇಲ್ಲಿಯವರೆಗೂ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಬಹುದು.

ಮದುವೆಗೂ ಮುನ್ನ ಈ ವಧುವಿಗೆ ಅಂದ್ರೆ ಯುವತಿಗೆ ಯಾರಾದರೂ ಪೀಡಿಸುತ್ತಿದ್ದರಾ ಅಥವಾ ಯುವತಿ ಯಾರನ್ನಾದರೂ ಪ್ರೀತಿ‌ ಮಾಡುತ್ತಿದ್ದಳೇ.? ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಆದರೆ ವಧು‌ ಈ ಯುವತಿ ತಾನಾಗಿಯೇ ಯಾರೊಂದಿಗಾದರೂ ಹೋಗಿದ್ದಾಳೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆದರೆ ಮದುವೆಯಾಗಿ ಇನ್ನೇನು ಮೊದಲ ರಾತ್ರಿ ದಿನವೇ ಹೆಂಡತಿಯನ್ನು ಅಪಹರಿಸಿರುವದು‌ ಮಲ್ಲನಗೌಡರನ್ನು ಅಪಾರ ಘಾಸಿಗೊಳಿಸಿದೆ.

ಕಾಣೆಯಾಗಿರುವ ಹೆಂಡತಿಯನ್ನು ಕೂಡಲೇ ಹುಡುಕಿ ಕೊಡುವಂತೆ ಮಲ್ಲನಗೌಡ ಪೊಲೀಸರಲ್ಲಿ ಗೋಗರೆಯುತ್ತಿದ್ದಾನೆ. ವಧು ಅಪಹರಣದ ಹಿಂದೇ ಮತ್ತೊಂದು ಸ್ಟೋರಿ ಇರುವ ಅನುಮಾನವಿದೆ.

ಯುವತಿ ಪತ್ತೆಯಾದ ಬಳಿಕವೇ ಪ್ರಕರಣ ಯಾವ ಸ್ವರೂಪ ಪಡೆಯಲಿದೆ‌‌ ಎಂಬುದು‌ ತಿಳಿಯಲಿದೆ. ಪೊಲೀಸರು‌ ತನಿಖೆ‌ ಮುಂದುವರೆಸಿದ್ದ ಯುವತಿ ಪತ್ತೆಗೆ ಜಾಲ‌ ಬೀಸಿದ್ದಾರೆ. ಯುವತಿ‌ ಪತ್ತೆಯಾದ ಬಳಿಕ‌ ಸತ್ಯಾಂಶ ಹೊರಬರಲಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button