ವಿನಯ ವಿಶೇಷ

ಕುಟುಂಬ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಅಗತ್ಯ- ಪುಟ್ಟಗೌರಿ

ಜನಮನ ರಂಜಿಸಿದ ಹಾಸ್ಯ ರಸಮಂಜರಿ

ಬಾಲ್ಯ ವಿವಾಹ ಪಿಡುಗು ನಿರ್ಮೂಲನೆಗೆ ಬದ್ಧ ನಟಿ ರಂಜನಿ ಘೋಷಣೆ

ಯಾದಗಿರಿ, ಶಹಾಪುರಃ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಸಬಲತೆ ಹೊಂದಿರಬೇಕು. ಆಗ ಕುಟುಂಬ ನಿರ್ವಹಣೆ ಸುಲಭವಾಗಲಿದ್ದು, ಮಾದರಿ ಮಹಿಳೆಯಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟಿ ರಂಜಿತಾ ಹೇಳಿದರು.

ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಇಲ್ಲಿನ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಆಯೋಜಿಸಿದ್ದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಿರುತೆರೆಯ ಧಾರವಾಹಿಗಳು ಹೆಚ್ಚಾಗಿ ಸಂಸಾರಿಕ ಮತ್ತು ವೈವಾಹಿಕ ಬದುಕನ್ನೇ ಆಧರಿಸಿಕೊಂಡು ಬರುತ್ತಿದ್ದು, ಮೌಡ್ಯಗಳಿಂದ ಪುಟ್ಟ ಮಕ್ಕಳ ಬಲಿ ಕುರಿತು ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪ್ರತಿಬಿಂಬಿಸಲಾಗಿದೆ. ಬಾಲ್ಯ ವಿವಾಹದಿಂದ ಉಂಟಾಗುವ ಪರಿಣಾಮಗಳನ್ನು ಆ ಧಾರವಾಹಿಯಲ್ಲಿ ಪುಟ್ಟಗೌರಿಯಾಗಿ ನಾನು ಅಭಿನಯಿಸಿದ್ದೇನೆ.
ಇಷ್ಟೊಂದು ಜನ ಸೇರಿರುವದು ನನಗೆ ಖುಷಿ ತಂದಿದೆ.

ಉತ್ತರ ಕರ್ನಾಟಕ ಜನರ ಅಭಿಮಾನದಿಂದಲೇ ಇವತ್ತು ನಮ್ಮ ಬೆಳವಣಿಗೆ ಕಾಣುತ್ತಿದ್ದೇವೆ. ಸದಾ ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದು ಕೋರಿದರು. ಸಸಿಗೆ ನೀರೆರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಹಾಸ್ಯ ಪ್ರತಿಯೊಬ್ಬರ ಆರೋಗ್ಯವನ್ನು ಸುಧಾರಿಸಲಿದೆ.

ಆಧುನಿಕ ಯುಗದಲ್ಲಿ ಹಣ ಗಳಿಸುವ ಭರದಲ್ಲಿ ಸದಾ ದುಡಿಮೆ ದುಡಿಮೆ ಎಂದು ಜನರು ಒತ್ತಡದ ಜೀವನಕ್ಕೆ ಬಲಿಯಾಗುತ್ತಿದ್ದಾರೆ. ಒತ್ತಡದಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಹೀಗಾಗಿ ಒತ್ತಡದಿಂದ ಮೈಮನ ತಣಿಸಿಕೊಳ್ಳಲು ಇಂತಹ ಹಾಸ್ಯ ಭರಿತ ಕಾರ್ಯಕ್ರಮಗಳು ಅಗತ್ಯ.

ಇಲ್ಲಿನ ಜನರಿಗೆ ಅಗತ್ಯವಿದ್ದ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಸಂಸ್ಥೆ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ನೆರೆದ ಹಲವಾರು ಜನರು ನಟಿ ರಂಜಿತಾ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಪುಟ್ಟಗೌರಿ ಅಷ್ಟೆ ಚುರುಕಾಗಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು.

ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಚಂದ್ರಶೇಖರ ಆರಬೋಳ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ರಾಮಚಂದ್ರ ಕಾಶಿರಾಜ, ಡಾ.ಬಸವರಾಜ ಇಜೇರಿ, ಜೆಇ ಬಕ್ಕಪ,್ಪ ಸುಭಾಶ ಕಾನಗೌಡರ್, ಮಹೇಶ ಆನೇಗುಂದಿ, ಗುರು ಕಾಮಾ, ಬಸವರಾಜ ಆನೇಗುಂದಿ, ಸಾಯಬಣ್ಣ ಪುರ್ಲೆ, ರಾಜಶೇಖರಗೌಡ ನಗನೂರ ಉಪಸ್ಥಿತರಿದ್ದರು.

ಸಂಸ್ಥೆಯ ರಾಜೂ ಬಾಣತಿಹಾಳ, ಸಂತೋಷ, ಶಂಕರ ಆನೇಗುಂದಿ, ಮೌನೇಶ ಆನೇಗುಂದಿ ಇತರರು ಇದ್ದರು.
ಹಾಸ್ಯ ಕಲಾವಿದರಾದ ಸಂಜು ಬಾಬು, ಗೋಪಾಲ ಇಂಚಿಗೇರಿ ಸಹೋದರರು ಇತರರು ನಾಗರಿಕರನ್ನು ನಗೆ ಗಡಲಲ್ಲಿ ತೇಲಿಸಿದರು.

ಬಾಲ್ಯ ವಿವಾಹ ತಡೆ ಅಭಿಯಾನಕ್ಕೆ ಕೈಜೋಡಿಸುವೆ-ಪುಟ್ಟಗೌರಿ

ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ಬೆಂಗಳೂರ ಮೈಸೂರ ಭಾಗದಲ್ಲಿ ಸಂಪೂರ್ಣ ಕಡಿಮೆಯಾಗಿದೆ ಅಂದರೆ ತಪ್ಪಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದಲ್ಲ ಇನ್ನೂ ಬಾಲ್ಯ ವಿವಾಹ ಪಿಡುಗು ಜೀವಂತವಾಗಿದೆ ಎಂಬುದನ್ನು ನಿಮ್ಮ ಬಾಯಿಯಿಂದಲೇ ಕೇಳುತ್ತಿದ್ದೇನೆ ಎಂದ ನಟಿ ರಂಜಿತಾ,
ಯುವ ಮುಖಂಡ ಗುರು ಕಾಮಾ ಅವರು ಕೇಳಿದ ಬಾಲ್ಯ ವಿವಾಹ ಪದ್ಧತಿ ಅಳಿಸಲು ಉಚಿತವಾಗಿ ರಾಯಭಾರಿಯಾಗಿ ಸೇವೆ ಸಲ್ಲಿಸಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗೆ ಖಂಡಿತವಾಗಿ ಭಾಗವಹಿಸುತ್ತೇನೆ.

ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಂಬರುವ ದಿನಗಳಲ್ಲಿ ಸಾಮಾಜಿಕ ಸೇವೆ ಕುತು ಬಾಳ್ಯ ವಿವಾಹ ಪದ್ಧತಿ ಅಳಿಸುವ ಕುರಿತು ಅಭಿಯಾನ ಹಮ್ಮಿಕೊಂಡಲ್ಲಿ ಭಾಗವಹಿಸುತ್ತೇನೆ ಎಂದು ಘೋಷಿಸಿದರು. ನೆರೆದ ಜನರು ನಟಿಯ ಸಾಮಾಜಿಕ ಕಾಳಜಿ ಬಗ್ಗೆ ಸಂತಸಗೊಂಡು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು.

Related Articles

Leave a Reply

Your email address will not be published. Required fields are marked *

Back to top button