ವಿಕಲಚೇತನರಿಗೆ ಉದ್ಯೋಗದ ಆಸರೆ ಅಗತ್ಯ-ದರ್ಶನಾಪುರ
ವಿಶ್ವ ಅಂಗವಿಕಲರ ದಿನಾಚರಣೆ
ಯಾದಗಿರಿ, ಶಹಾಪುರಃ ವಿಕಲಚೇತನರಿಗೆ ಬರಿ ಮಾಶಾಸನ ನೀಡಿದರೆ ಸಾಲದು, ಅವರು ಸಹ ವೃತ್ತಿಪರ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಬದುಕಿಗೆ ಆಸರೆ ಮಾಡಿಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಾ ಅಂಗವಿಕಲರ ಹೋರಾಟ ಸಮಿತಿ ಆಶ್ರಯದಲ್ಲಿ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಕರಕುಶಲಕರ್ಮಿಗಳಾಗಿ ವೃತ್ತಿಯನ್ನು ಅವಲಂಬಿಸಬೇಕು. ಸರ್ಕಾರ ನೀಡುವ ಸಹಾಯ ಧನದ ಸದುಪಯೋಗ ಪಡೆಯಬೇಕು.
ಕರಕುಶಲತೆಯಲ್ಲಿ ಸೂಕ್ತ ತರಬೇತಿ ಪಡೆದುಕೊಂಡು ಆಸಕ್ತ ವೃತ್ತಿಯಲ್ಲಿ ವ್ಯವಹಾರ ಆರಂಭಿಸಬೇಕು
ಮುಂಬರುವ ದಿನಗಳಲ್ಲಿ ಅಂಗವಿಕಲ ಕಲ್ಯಾಣಕ್ಕಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗುವದು. ಅಲ್ಲದೆ ಶೇ.5ರ ಅನುದಾನದಲ್ಲಿ 30 ಜನರಿಗೆ ತ್ರೀಚಕ್ರ ವಾಹನಗಳ ಮೋಟಾರ ಬೈಕ್ ನೀಡಲಾಗುತ್ತದೆ. ಪ್ರತಿಯೊಬ್ಬರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಗೌಡ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ತಹಿಶೀಲ್ದಾರ ಸಂಗಮೇಶ ಜಿಡಗೆ, ತಾ.ಪಂ. ಅಧ್ಯಕ್ಷ ಬಸವಂತರಡ್ಡಿ ಸಾಹು ಹತ್ತಿಗೂಡೂರ, ಪೌರಾಯುಕ್ತ ಬಸವರಾಜ ಶಿವಪೂಜೆ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಸ್.ಕೆ.ಟಕ್ಕಳಕಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಕರವೇ ಉಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ, ಕರವೇ ತಾಲೂಕಾ ಅಧ್ಯಕ್ಷ ಭೀಮು ಶಖಾಪುರ, ನಾಗರಾಜ ಮಲ್ಕಿ, ವಿಶ್ವ ಗಂಗಾ ಟ್ರಸ್ಟ್ ಅಧ್ಯಕ್ಷ ಆರ್.ವಿಶ್ವನಾಥರಡ್ಡಿ, ವೀರೇಶ ರಂಗಂಪೇಟ, ಚಿದಾನಂದ ಬೋಳಾರಿ, ಜಿಲ್ಲಾ ಅಧ್ಯಕ್ಷ ಸಂಗನಗೌಡ ಧನರಡ್ಡಿ ಸೇರಿದಂತೆ ತಾಲೂಕಾ ವಿಕಲಚೇತನರ ಅಧ್ಯಕ್ಷ ಬಾಬು ಜಾನಿ ಉಪಸ್ಥಿತರಿದ್ದರು.
ಮುಖಂಡರಾದ ರಮೇಶ ಹಳಿಸಗರ, ಈರಣ್ಣ ಚಟ್ನಳ್ಳಿ, ಮೌನೇಶ ಸಗರ, ಶರಣು ಕನ್ಯಾಕೋಳೂರ, ನಾಗರಾಜ ಹೂಗಾರ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ಅಂಗವಿಕಲರಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ನಿರ್ಗತಿಕ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಡೈಜಸ್ಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಿದ್ದಣ್ಣ ಮನಗನಾಳ ಸ್ವಾಗತಿಸಿದರು. ಮಲ್ಲು ನಾಟೇಕಾರ ನಿರೂಪಿಸಿದರು. ಪರಶುರಾಮ ವಂದಿಸಿದರು.