ವಿನಯ ವಿಶೇಷ

ಸಿಸಿ ರಸ್ತೆ ಕಾಮಗಾರಿಗೆ ದರ್ಶನಾಪುರ ಚಾಲನೆ

ಯಾದಗಿರಿ, ಶಹಾಪುರಃ ತಾಲೂಕಿನ ಬೂದನೂರ ಗ್ರಾಮದಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಯಕ್ಕಿಗಡ್ಡಿ ಗ್ರಾಮದಲ್ಲಿ 37.1 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಚಾಲನೆ ನೀಡಿದರು.

ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ದರ್ಶನಾಪುರ, ಪ್ರತಿ ಗ್ರಾಮಗಳಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ಅಗತ್ಯ ಬೇಡಿಕೆಗಳಾಗಿದ್ದು ಅವುಗಳನ್ನು ಸಮಪರ್ಕವಾಗಿ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಿಸಿ ರಸ್ತೆ ಗುಣಮಟ್ಟದಿಂದ ಕೂಡಿರಲಿ.

ನಾಗರಿಕರು ರಸ್ತೆ ಚರಂಡಿ ಕಾಮಗಾರಿ ಕುರಿತು ಕಾಳಜಿವಹಿಸಬೇಕು. ಗುತ್ತಿಗೆದಾರರು ಅದಕ್ಕೆ ಹೊರತಾಗಿಲ್ಲ. ಕಾಮಗಾರಿಯನ್ನು ನಿಯಮನುಸಾರ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಸನಗೌಡ ಸುಬೇದಾರ, ಕಾಂಗ್ರೆಸ್ ಮುಖಂಡ ಶಿವಮಹಾಂತ ಚಂದಾಪುರ, ಗೌಡಪ್ಪಗೌಡ ಆಲ್ದಾಳ, ಗ್ರಾಪಂ ಅಧ್ಯಕ್ಷÀ ಕಾಳಪ್ಪ ದೊಡ್ಡಮನಿ, ಬಸನಗೌಡ ಕಾಡಂಗೇರಾ, ಬಿಕ್ಷನಗೌಡ ಕಾಡಂಗೇರಾ, ಭೂಸೇನಾ ಇಲಾಖೆ ಅಧಿಕಾರಿ ರಫೀಕ್ ಅಹ್ಮದ್, ತಾಪಂ ಮಾಜಿ ಸದಸ್ಯ ಶಂಕರ ಸಿಂಘೆ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button