ವಿನಯ ವಿಶೇಷ

ಪೌರ ಕಾರ್ಮಿಕರ ನೌಕರಿ ಖಾಯಂ-ಹರ್ಷ

ಪೌರ ಕಾರ್ಮಿಕರಿಗೆ ನೌಕರಿ ಖಾಯಂ- ಶಾಸಕರಿಂದ ಆದೇಶ ಪತ್ರ ವಿತರಣೆ

ನೌಕರಿ ಖಾಯಂ- ಪೌರ ಕಾರ್ಮಿಕರ ಹರ್ಷ

ಯಾದಗಿರಿ, ಶಹಾಪುರಃ ನಗರಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ 17 ಜನರನ್ನು ಸರ್ಕಾರ ಇದೀಗ ಅವರ ನೌಕರಿ ಖಾಯಂಗೊಳಿಸಿ ಆದೇಶ ಹೊರಡಿಸಿದೆ.
ಇಂದು ನಗರದಲ್ಲಿ ಖಾಯಂಗೊಂಡ ಪೌರಕಾರ್ಮಿಕರಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಖಾಯಂಗೊಳಿಸಿ ಹೊರಡಿಸಿದ ಆದೇಶದ ಪ್ರತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಸೇವೆ ಅಪಾರ, ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದೀರಿ. ಪ್ರಸ್ತುತ ಸರ್ಕಾರ ನಿಮ್ಮ ಸೇವೆಯನ್ನು ಗುರುತಿಸಿ ಖಾಯಂಗೊಳಿಸಿದೆ.
ಕಾರ್ಮಿಕರಿಗೆ ಇನ್ಯಾವದೇ ಚಿಂತೆ ಬೇಡ. ಸರ್ಕಾರ ನಿಮ್ಮ ಸಂಸಾರಕ್ಕೆ ಭದ್ರತೆ ಒದಗಿಸಿದಂತಾಗಿದೆ. ಸಮರ್ಪಕವಾಗಿ ಎಂದಿನಂತೆ ನಿಮ್ಮ ವಏತ್ತಿಯನ್ನು ಸಂತೋಚದಾಯಕ ನಿರ್ವಹಿಸಿ.

ಕಾರ್ಮಿಕರ ಸೇವೆಯಿಂದಲೇ ಇಂದು ನಾಗರಿಕರು ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂದರು. ಕಾರ್ಮಿಕರ ನೌಕರಿ ಖಾಯಂಗೊಳಿಸಿರುವದು ಸಂತಸ ತಂದಿದೆ ಎಂದರು.

ಕಾರ್ಮಿಕ ಮುಖಂಡ ಮಾನಪ್ಪ ಮತ್ತು ಭೀಮರಾಯ ಮಾತನಾಡಿ, ಸತತ ಮಳೆ, ಬಿಸಿಲು ಚಳಿ ಎನ್ನದೆ ಜೀವದ ಹಂಗು ತೊರೆದು ನಗರಸ ಸ್ವಚ್ಛತೆಯಿಂದಿಡಿದು ಎಲ್ಲಾ ಕೆಲಸವನ್ನು ಅದು ಇದು ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದ ನಮಗೆ ಈಗಲಾದರೂ ಸರ್ಕಾರ ಖಾಯಂಗೊಳಿಸಿ ಆದೇಶ ನೀಡಿರುವದು ಸಂತಸ ತಂದಿದೆ. ಈ ಮೊದಲು ಕೆಂಭಾವಿ ಪುರಸಭೆಯ 11 ಜನ ಮತತು ಇಲ್ಲಿನ 15 ಜನರಿಗೆ ಖಾಯಂಗೊಳಿಸಲಾಗಿತ್ತು ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ನೌಕರಿ ಖಾಯಂಗೊಳಿಸಲು ಸತತ ಪ್ರಯತ್ನ ನಡೆಸಿದ ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಹಾಗೂ ಮಾಜಿ ಮತ್ತು ಹಾಲಿ ಶಾಸಕರು ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button