ಯಾದಗಿರಿಗೆ ಮೆಡಿಕಲ್ ಕಾಲೇಜು ಅಗತತ್ಯೆ-ಅಭಿಯಾನ ಜನರ ಅಭಿಪ್ರಾಯ
ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು..!
ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಆರಂಭದಿಂದ ಈ ಭಾಗದ ಜನರಿಗೆ ತುಂಬಾ ಅನೂಕೂಲವಾಗಲಿದೆ. ಆರ್ಥಿಕವಾಗಿ ಜಿಲ್ಲೆ ಬೆಳೆಯಲಿದೆ. ವಿವಿಧ ಸಣ್ಣಪುಟ್ಟ ವ್ಯವಹಾರಗಳು ತಲೆ ಎತ್ತಲಿವೆ. ಜಿಲ್ಲೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ನಾಗರಿಕರಿಗೆ ಆರೋಗ್ಯ ತಪಸಾಣೆಗೆ, ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ಅನುಕೂಲವಾಗಲಿದೆ. ಪ್ರವಾಸೋದ್ಯಮವು ಆಗ ಉತ್ತೇಜನ ಪಡೆಯಲಿದೆ. ಒಂದರಿಂದ ಇನ್ನೊಂದರ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮೆಡಿಕಲ್ ಕಾಲೇಜು ನಮ್ಮ ಜಿಲ್ಲೆಯ ಹಕ್ಕು ಅದು ಬೇಕೇ ಬೇಕು. ಆದರೆ ಸಿಎಂ ಕುಮಾರಸ್ವಾಮಿ ನಮ್ಮ ಜಿಲ್ಲೆಗೆ ಅಗತ್ಯವಿಲ್ಲ ಎಂದಿರುವದು ತಪ್ಪು.
-ಗುರು ಪಾಟೀಲ್ ಶಿರವಾಳ. ಮಾಜಿ ಶಾಸಕ.ಶಹಾಪುರ.
—————–
ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯವಿದೆ. ಸಿಎಂ ಕುಮಾರಸ್ವಾಮಿ ಅದ್ಯಾವ ಲೆಕ್ಕದಿಂದ ಯಾದಗಿರಿಗೆ ಮೆಡಿಕಲ್ ಅಗತ್ಯವಿಲ್ಲ ಎಂದಿದ್ದಾರೆ ಗೊತ್ತಿಲ್ಲ. ಅವರ ಜಿಲ್ಲೆ ರಾಮನಗರ, ಹಾಸನಗಳಿಗೆ ಎಲ್ಲಾ ಬೇಕು. ನಮ್ಮ ಜಿಲ್ಲೆಗೆ ಆದರೆ ಅಗತ್ಯವಿಲ್ಲೇನು. ಇಲ್ಲಿನ ಮುನುಷ್ಯರೇ ಸ್ವಾಮಿ. ನಮ್ಮ ಮಕ್ಕಳಿಗಗೂ ಮೆಡಿಕಲ್ ಕಾಲೇಜು ಅಂದ್ರೆ ಏನೆಂಬುದ ಅರಿವು ಆಗಲಿ.
ಮೆಡಿಕಲ್ ಕಾಲೇಜು ಆರಂಭದಿಂದ ಅದನ್ನು ನೋಡಿ ಇಲ್ಲಿನ ಮಕ್ಕಳಿಗೆ ನಾನು ಮೆಡಿಕಲ್ ಓದಬೇಕು. ವೈದ್ಯರಾಗಬೇಕೆಂಬ ಹಂಬಲ ಬೆಳೆಯಲಿದೆ. ಅದರಿಂದ ಸಾಕಷ್ಟು ಉಪಯುಕ್ತವಿದೆ. ನಗರ ಬೆಳವಣೆಗೆಗೆ ಸಹಕಾರಿಯೂ ಆಗಲಿದೆ.
–ಲಾಲನಸಾಬ ಖುರೇಶಿ. ಹಿರಿಯ ನಗರಸಭೆ ಸದಸ್ಯ.
————————–
ನಮ್ಮ ಜಿಲ್ಲೆ ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಆದರೆ, ನಮ್ಮ ಜಿಲ್ಲೆ ಜನಕ್ಕೆ ಮಾತ್ರ ಅವಕಾಶ ಇರಲ್ಲಾರ್ರಿ. ಹಾಸನ, ರಾಮನಗರದ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ದೊರೆತಲ್ಲಿ ಅವರೇ ಇಲ್ಲಿ ಬಂದು ಓದಬಹುದು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಿದಲ್ಲಿ. ಅದೇನು ನಮ್ಮ ಜಿಲ್ಲೆಯವರಿಗೆ ಮಾತ್ರ ಅಂದ್ಕೊಂಡಿರೇನು. ಇಲ್ಲಿ ಮೆಡಿಕಲ್ ಕಾಲೇಜು ಆಗುವದರಿಂದ ಈ ಭಾಗ ಒಂದಿಷ್ಟು ಅಭಿವೃದ್ಧಿ ಹೊಂದಲಿದೆ ಎಂಬುವದು ನಮ್ಮ ಆಸೆ.
ಇವಾಗ್ ಬೆಂಗಳೂರ, ವಿಜಯಪುರ ಬೆಳಗಾವಿಯಲ್ಲಿ ಮಡಿಕಲ್ ಕಾಲೇಜುಗಳಿವೆ. ರಾಜ್ಯದ ಹಲವಾರು ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲಿ ಸೀಟ್ ದೊರೆಯುತ್ತದೆಯೋ ಅವರ ಆಸಕ್ತಿ ಮೇರೆಗೆ ಆಯಾ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡು ಓದಲ್ವೆ. ಹಾಗೇ..
ಹೀಗಾಗಿ ಯಾದಗಿರಿಗೆ ಮೆಡಿಕಲ್ ಅಗತ್ಯವೇ.? ಎಂಬುದರಲಿ ಅರ್ಥವಿಲ್ಲ. ಸಿಎಂ ಕುಮಾರಸ್ವಾಮಿ ಅವರು ಯಾವ ವಿಚಾರದಿಂದ ಅಗತ್ಯತೆ ಇಲ್ಲ ಎಂದಿದ್ದಾರೆಯೋ..ಗೊತ್ತಾಗ್ತಿಲ್ಲ. ನಮ್ಮ ಜನಪ್ರತಿನಿಧಿಗಳು ಅವರನ್ನು ಮತ್ತೊಮ್ಮೆ ನಿಲ್ಲಿಸಿ ಕೇಳಬೇಕಷ್ಟೆ.!
–ಆನಂದಕುಮಾರ ಸಾಸನೂರ ಮತ್ತು ರವಿ ಹೊಸಮನಿ. ಉಪನ್ಯಾಸಕರು. ಶಹಾಪುರ.