ಪ್ರಮುಖ ಸುದ್ದಿ
ನಾನೇ ಸಚಿವ ಹೆಚ್.ಡಿ.ರೇವಣ್ಣ ರಾಜೀನಾಮೆ ಕೊಡಿಸುವೆ – ಶಾಸಕ ರಾಮಸ್ವಾಮಿ
ಹಾಸನ : ಅತೃಪ್ತರು ತಮ್ಮ ರಾಜೀನಾಮೆಗೆ ಸಚಿವ ಹೆಚ್.ಡಿ.ರೇವಣ್ಣ ಕಾರಣ ಎಂದು ಹೇಳಲಿ. ನಾನೇ ಸಚಿವ ರೇವಣ್ಣ ಅವರ ರಾಜಿನಾಮೆ ಕೊಡಿಸ್ತೇನೆ ಎಂದು ಅರಕಲಗೂಡು ತಾಲ್ಲೂಕಿನ ಹಳ್ಳಿಮೈಸೂರಲ್ಲಿ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಸವಾಲು ಹಾಕಿದ್ದಾರೆ. ಸಚಿವ ರೇವಣ್ಣ ಹೆಚ್ಚು ಸ್ಪೀಡ್, ಹೆಚ್ಚು ಸ್ಪೀಡ್ ಅದಾಗ ಹೀಗೆ ಆಗುತ್ತದೆ. ಕಮಲ ಪಕ್ಷ ಸೇರಲು ಹೋಗಿರುವವರು ಒಂದು ಆಪಾದನೆ ಮಾಡಿ ಹೋಗಿದ್ದಾರಷ್ಟೇ ಎಂದು ಕಿಡಿಕಾರಿದ್ದಾರೆ.
ರಾಜಕಾರಣದಲ್ಲಿ ಹೊಗಳುಭಟ್ಟರು ತುಂಬಾ ಅಪಾಯಕಾರಿ. ಎಂಟಿಬಿ ನಾಗರಾಜ್ ಹಾಗು ಸೋಮಶೇಖರ್ ಅವರು ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ಅತಿ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಈಗ ಅವರೆಲ್ಲಾ ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಪ್ರಸಕ್ತ ರಾಜಕಾರಣ ವಿಷಮಸ್ಥಿತಿಯಲ್ಲಿದೆ ಎಂದು ಜೆಡಿಎಸ್ ನ ಹಿರಿಯ ಶಾಸಕ ರಾಮಸ್ವಾಮಿ ಅಭಿಪ್ರಾಯಪಟ್ಟರು.